Sunday, December 13, 2009

ನೂರು ಜನ್ಮಕೂ ಮರೆಯಲಾದಿತೆ?

ನಮ್ಮಲ್ಲೊಂದು ಗಾದೆ ಮಾತಿದೆ 'ಅಡಿಕೆಗೆ ಹೋದ ಮಾನ,ಆನೆ ಕೊಟ್ಟರೆ ಬಂದೀತೆ'? ಹೌದು ಇಂತಹದ್ದೊಂದು ಪ್ರಶ್ನೆ ಉದ್ಭವವಾಗಿದ್ದು ಮೊನ್ನೆ ಮೊನ್ನೆಯಷ್ಟೆ ಸುದ್ದಿಗೆ ಗ್ರಾಸವಾಗಿದ್ದ ಅಂದ್ರಿತಾ ರೇ-ನಾಗತ್ತಿಹಳ್ಳಿ ಪ್ರಕರಣ. ಇದನ್ನು ಬರೆಯಬೇಕೋ ಬೇಡವೋ ಎಂಬ ಜಿಜ್ಞಾಸೆಗೆ ನಡುವೆ ಇದನ್ನು ಚರ್ಚೆಗೆ ತಂದಿದ್ದೇನೆ. ಇದು ಯಾಕೆ ಚರ್ಚೆಗೆ ಬರಬೇಕು? ಹಾನಿ ಯಾರಿಗೆ? ಸಮಾಜದ ಮೇಲೆ ಇದು ಎಂತಹ ಪರಿಣಾಮ ಬಿರುತ್ತದೆ? ಅಷ್ಟಕ್ಕೂ ಇಂತಹ ಪ್ರಕರಣಗಳು ಯಾಕಾದರೂ ಜರುಗುತ್ತವೆ ಎಂಬುದು ಮೂಲ ಪ್ರಶ್ನೆ.

ಹೇಳಿ ಕೇಳಿ ನಾಗತ್ತಿಹಳ್ಳಿ ಚಂದ್ರಶೇಖರ್ ಸೂಕ್ಷ್ಮ ಗ್ರಹಿಕೆಯ ಸಂವೇದನಾಶೀಲ ಮನಸ್ಥಿತಿಯ ಪ್ರಬುದ್ದ ಸಾಹಿತಿ ಮತ್ತು ನಿರ್ದೇಶಕರು. ಭಾವನಾತ್ಮಕವಾದ ಸಂಬಂಧಗಳನ್ನು ಅತ್ಯುತ್ತಮವಾಗಿ ಸೆಲ್ಯೂಲಾಯ್ಡ್ ಮಾಧ್ಯಮದಲ್ಲಿ ಬಿಂಬಿಸಬಲ್ಲ ಛಾತಿಯ ಮನುಷ್ಯ. ಇವರು ನಿರ್ದೇಶಿಸಿದ ಸಾಧಾರಣ ಕಥೆಯ 'ಉಂಡೂ ಹೋದ ಕೊಂಡು ಹೋದ' ಸಿನಿಮಾದ ಯಶಸ್ಸು ಅಮೇರಿಕಾ ಅಮೇರಿಕಾ, ನನ್ನ ಪ್ರೀತಿಯ ಹುಡುಗಿ, ಅಮೃತಧಾರೆ, ಮಾತಾಡ್ ಮಾತಾಡ್ ಮಲ್ಲಿಗೆ, ಭಾ ನಲ್ಲೆ ಮಧುಚಂದ್ರಕೆ, ಹೂಮಳೆ ಇತ್ತೀಚೆಗಿನ ಒಲವೇಜೀವನ ಲೆಕ್ಕಾಚಾರದಂತಹ ಸೂಪರ್ ಚಿತ್ರಗಳನ್ನು ತೆರೆಗೆ ನೀಡಿದ್ದಾರೆ. ಕಾಡಿನ ಬೆಂಕಿ ಚತ್ರದ ಮೂಲಕ ಸಿನಿ ಬದುಕು ಆರಂಬಿಸಿದರು. ಸಂಗೀತವೇ ಪ್ರಧಾನವಾಗಿದ್ದ ಹೊಸ ಮುಖಗಳನ್ನ ಹೊಂದಿದ 'ಪ್ಯಾರಿಸ್ ಪ್ರಣಯ" ವಿದೇಶದಲ್ಲಿ ಚಿತ್ರೀಕರಣ ಗೊಂಡ ಚಿತ್ರವಾಗಿದ್ದು ವಿಭಿನ್ನ ಅನುಭವ ನೀಡಿತ್ತು. 100ಕ್ಕ ಹೆಚ್ಚು ಹಾಡುಗಳನ್ನು ರಚಿಸಿರು ವ ನಾಗತ್ತಿಹಳ್ಳಿ ಉತ್ತಮ ಗೀತ ರಚನೆಕಾರರು ಹೌದು. ಇದುವರೆಗೂ 15ಕನ್ನ ಡಸಿನಿಮಾಗಳನ್ನ ನಿರ್ದೇಶಿಸಿರು ವನಾಗತ್ತಿಹಳ್ಳಿ 10ಕಿರುತೆರೆ ಧಾರಾವಾಹಿಗಳನ್ನು ನಿರ್ದೇಶಿಸಿ ಹೆಸರು ಮಾಡಿದ್ದಾರೆ. ಅಂತರರಾಷ್ಟ್ರೀಯ ಕ್ಯಾನೆ ಸಿನಿಮಾ ಫೆಸ್ಟಿವಲ್ ನಲ್ಲಿಯೂ ಪ್ರಂಶಶೆಗೆ ಪಾತ್ರರಾಗಿದ್ದಾರೆ. ಮೈಸೂರು ವಿವಿ ಯಲ್ಲಿ ಕನ್ನಡ ಸಾಹಿತ್ಯದಲ್ಲಿ ಎಂಎ ಮುಗಿಸಿದ ನಾಗತ್ತಿಹಳ್ಳಿ 8ಚಿನ್ನದ ಪದಕ ಮತ್ತು 2ನಗದು ಬಹುಮಾನ ಪಡೆ ದ ಪ್ರತಿಭಾವಂತ. ಬೆಂಗಳೂರು ವಿವಿ ಯಲ್ಲಿ ಪ್ರಾಧ್ಯಾಪಕ ವೃತ್ತಿಯಲ್ಲಿದ್ದ ನಾಗತ್ತಿಹಳ್ಳಿ, ಸಾಪ್ಟ್ ವೇರ್ ಇಂಜಿನಯರ್ ಶೋಭಾರನ್ನು ಅಂತರ್ ಜಾತೀಯ ವಿವಾಹವಾಗಿದ್ದಾರೆ. ಸಿಹಿ ಮತ್ತು ಕನಸು ಎಂಬ ಇಬ್ಬರು ಮಕ್ಕಳು ಇವರಿಗುಂಟು. ಸಧ್ಯ ಅವರು ಅಮೇರಿಕಾದಲ್ಲ ನೆಲೆಸಿದ್ದಾರೆ! ಸಿನಿಮಾವನ್ನು ವೃತ್ತಿ ಬದುಕಾಗಿಸಿಕೊಂಡ ನಾಗತ್ತಿಹಳ್ಳಿ ಮಾತ್ರ ಇಲ್ಲಿಯೇ ಇದ್ದಾರೆ.
ಇನ್ನು ಅಂದ್ರಿತಾ ರೇ ವಿಷಯಕ್ಕೆ ಬರೋಣ. ಈಕ ಮೂಲತಹ ಬಂಗಾಳಿ, ಹುಟ್ಟಿದ್ದು ರಾಜಸ್ಥಾನದಲ್ಲಿ, ಬೆಳೆದಿದ್ದು ಬೆಂಗಳೂರಿನಲ್ಲಿ, ಕಳೆ ದ18ವರ್ಷಗಳಿಂ ದ ಅವರ ಕುಟುಂಬ ಬೆಂಗಳೂರಿನಲ್ಲಿಯೇ ನೆಲೆಸಿದೆ. ತಂದೆ ಎ ಕೆ ರೇ ಭಾರತೀ ಯ ವಾಯುಪಡೆಯಲ್ಲಿ ಡೆಂಟಿಸ್ಟ್ ಆಗಿ ನಿವೃತ್ತರಾಗಿದ್ದಾರೆ, ಆದರೂ ಬೆಂಗಳೂರಿನ ರಿಚ್ ಮಂಡ್ ರಸ್ತೆಯಲ್ಲಿ ಇವತ್ತಿಗೂ ಸ್ವಂತ ಕ್ಲಿನಿಕ್ ನಲ್ಲಿ ಪ್ರಾಕ್ಟೀಸ್ ನಡೆಸುತ್ತಾರೆ. ತಾಯಿ ಸುನೀತಾ ರೇ ಮಕ್ಕಳ ಸೈಕಾಲಜಿಸ್ಟ್ ಆಗಿದ್ದಾರೆ. ಐಂದ್ರಿತಾ ಬಾಲ್ಯ ಮತ್ತು ಪ್ರಾಥಮಿಕ ವಿಧ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಾಲ್ಡ್ ವಿನ್ ಪ್ರೌಢಶಾಲೆಯಲ್ಲಿ. ಈಗ ತಂದೆಯಂತಯೇ ಡೆಂಟಿಸ್ಟ್ ಆಗುವ ಕನಸು ಕಾಣುತ್ತಿರುವ ಅಂದ್ರಿ ತ ಅಂಬೇಡ್ಕರ್ ಡೆಂಟಲ್ ಕಾಲೇಜಿನಲ್ಲ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ಈ ನಡುವ ಮುಂಬೈಗೆ ತೆರಳ ಸಣ್ಣಪುಟ್ಟ ಜಾಹಿರಾತು ಮತ್ತು ಮಾಡೆಲಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದ ಅಂದ್ರಿತಾ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆದದ್ದು ಮಹೇಶಬಾಬು ನಿರ್ದೆಶನ ದ ಮೆರವಣಿಗೆ ಚಿತ್ರದ ಮೂಲ ಕ. ಇಲ್ಲಿಯವರೆಗೆ ಆಕೆ ಕನ್ನಡದಲ್ಲಿ ಅಭಿನಯಿಸಿದ್ದು 7ಚಿತ್ರಗಳು, ತೆಲುಗಿನಲ್ಲಿ ಒಂದು ಮತ್ತು ಹಿಂದಿಯಲ್ಲ ಒಂದು. ಇಂತಹ ಅಂದ್ರಿತಾ ನಾಗತ್ತಿಹಳ್ಳಿ ನಿರ್ದೇಶನದ "ನೂರು ಜನ್ಮಕೂ " ಚಿತ್ರದಲ್ಲಿ ಅಭಿನಯಿಸಲು ಹಾಕಾಂಗ್ ಗೆ ತೆರಳಿದ್ದರು.
ಡಿಸೆಂಬರ್ 10ರಂದು ತಂಡ ಭಾರತಕ್ಕೆ ವಾಪಾಸ್ ಆದಾಗ ಆದ ರಂಪ ರಾಮಾಯ ಣ ನಿಮಗೆಲ್ಲರಿಗೂ ತಿಳಿದದ್ದೇ. ಇಡೀ ಪ್ರಕರಣದಲ್ಲಿ ಮೇಲ್ನೋಟಕ್ಕೆ ನಿರ್ದೇಶ ಕನಾಗತ್ತಿಹಳ್ಳಿ ಚಂದ್ರಶೇಖರ್ ತಪ್ಪಿತಸ್ಥರಂತೆ ಕಾಣಿಸುತ್ತಿದ್ದರಾದರೂ, ಅವರ ಪರ ವಕಾಲತ್ತು ವಹಿಸಿದವರೇ ಹೆಚ್ಚು. ಮೇಷ್ಟ್ರು ನಮ್ಮವರು ಎಂಬ ಕಾರಣಕ್ಕೋ ಏನೋ. ಇಡೀ ಘಟನೆಗೆ ಸಂಬಂಧಿಸಿದಂತೆ ಐಂದ್ರಿತಾ ರೇ ಮಾಹಿತಿ ನೀಡಿ ಮೇಷ್ಟ್ರು ವುಮನೈಸರ್ ಎಂದು ಸ್ಪಷ್ಟ ಮಾತುಗಳಲ್ಲಿ ಆರೋಪಿಸಿದರು. ಆದರೆ ನಾಗತ್ತಿಹಳ್ಳಿ ಮತ್ತು ಮಾಧ್ಯಮಗಳು ಕಪಾಳ ಮೋಕ್ಷ ಪ್ರಕರಣವನ್ನೇ ಮುಖ್ಯ ವಾಹಿನಿಗೆ ತಂದರಲ್ಲದೇ ಅಸಲಿ ಆರೋಪವನ್ನು ಮರೆಮಾಚಿದರು. ಇಲ್ಲಿ ನಾಗತ್ತಿಹಳ್ಳಿ ತಪ್ಪಿತಸ್ಥರು ಎಂದು ಹೇಳುತ್ತಿಲ್ಲವಾದರೂ ಆರೋಪದ ವಾಸ್ತವ ನೆಲೆಗಟ್ಟಿನ್ಲಲಿ ಸಮರ್ಪಕ ಚರ್ಚೆ ಯಾಗಿದ್ದರೆ. ಸಿನಿಮಾ ಮಂದಿಗೆ ಸರಿಯಾದ ಸಂದೇಶ ರವಾನೆಯಾಗುತ್ತಿತ್ತು, ಆದರೆ ಆದದ್ದೇ ಬೇರೆ.
ಅಷ್ಟಕ್ಕೂ ಸದರಿ ವಿಚಾರದ ಚರ್ಚೆ ಏಕೆಂದರೆ ನಾಗತ್ತಿಹಳ್ಳಿ ಮತ್ತು ಐಂದ್ರಿತಾ ಇಬ್ಬರೂ ಸಾರ್ವಜನಿಕ ವ್ಯಕ್ತಿಗಳು. ಅವರ ನಡವಳಿಕೆಗಳು ಮತ್ತು ನಿಲುವುಗಳು ಸಾರ್ವಜನಿಕವಾಗಿ ಸಭ್ಯವಾಗಿರಬೇಕಾಗುತ್ತದೆ. ಅದರಲ್ಲೂ ಸಿನಿಮಾ ಮಾಧ್ಯಮ ಇತರ ಮಾಧ್ಯಮಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಜನರನ್ನು ತಲುಪುತ್ತದೆ. ಅವರ ಕ್ರಿಯೆಗಳನ್ನು ಜನ ಗಮನಿಸುತ್ತಾರೆ ಮತ್ತು ಅವಿವೇಕಿಗಳೂ ಅದನ್ನು ಅನುಕರಿಸುತ್ತಾರೆ. ಈಪೈಕಿ ಎರಡನೇ ಕೆಟಗರಿಯ ಜನರೇ ಹೆಚ್ಚು! ಹಾಗಾಗಿ ವಾಸ್ತವಾಂಶಗಳು ಚರ್ಚಾರ್ಹ ಹಾಗೂ ತಪ್ಪ-ಒಪ್ಪುಗಳು ತಿಳಿಯುತ್ತವೆ. ಸಿನಿಮಾ ಮಂದಿಯೆಂದರೆ ಮೊದಲೇ ಜನರಿಗೆ ಅಸಡ್ಡೆ 'ಶೀಲ' ಕಳೆದುಕೊಂಡವರು, ಮಜಾ ಮಾಡುವವರು ಎಂಬಿತ್ಯಾದಿ ಕಲ್ಪನೆಗಳು ಇವೆ. ಇವುಗಳಲ್ಲಿ ಕೆಲವು ನಿಜವಾದರೂ ಕೆಲವಕ್ಕೆ ರೆಕ್ಕೆ ಪುಕ್ಕ ಎರಡೂ ಇರುವುದಿಲ್ಲ. ಅಷ್ಟಕ್ಕೂ ಸಿನಿಮಾ ಲೋಕದಲ್ಲಿ ಇಂತಹ ಘಟನೆಗಳು ಇದೇ ಮೊದಲೇನಲ್ಲ, ಹಿಂದೆ ಪುಟ್ಟಣ್ಣ ಕಣಗಾಲ್ ರಂತ ಹ ನಿರ್ಧೇಶಕರು ಅಂದು ಕೊಂಡ ನಟನೆ ಬಾರದಿದ್ದಾಗ ಕಪಾಳ ಮೋಕ್ಷ ಮಾಡಿದ ಉದಾಹರಣೆಯಿದೆ. ರವಿಚಂದ್ರನ್ ಹಳ್ಳಿಮೇಷ್ಟ್ರು ಚಿತ್ರಕ್ಕೆ ಕರೆತಂದ ನಾಯಕಿ ರವಿಚಂದ್ರನ್ ಮೇಲೆ ರೇಪ್ ಕೇಸು ದಾಖಲಿಸಿದ ಘಟನೆಯಿದೆ.ಮೊನ್ನೆ ಮೊನ್ನೆಯಷ್ಟೇ ಮೈಸೂರು ಲೋಕೇಶ್ ಮಗ ಆದಿಲೋಕೇಶನ ಅವಾಂತರ ಬಯಲಿಗೆ ಬಂದಿದೆ. ಶೃತಿಯ ಸಹೋದರ ಶರಣ್ ಪ್ರೀತಿಸಿ ವಂಚಿಸಿ ಮದುವೆಯಾದ ನಿದರ್ಶನವಿದೆ, ಸಾಯಿ ಪ್ರಕಾಶ್ ಸೆಟ್ ನಲ್ಲಿ ನಟಿಯರೊಂದಿಗೆ ಅಸಹ್ಯವಾಗಿ ನಡೆದುಕೊಂಡ ಪ್ರಕರಣ, ನಟಿ ಮಹಾಲಕ್ಷ್ಮಿಯೊಂದಿಗೆ ನಟ ಜೈಜಗದೀಶ್ ಅಸಭ್ಯವಾಗಿ ವರ್ತಿಸಿ ತಪರಾಕಿ ಪಡೆದ ಘಟನೆ, ಪ್ರಭಾಕರ್ ಬಗೆಗೆ ಅಸಹ್ಯದ ಕಥೆಗಳಿವೆ ಹೀಗೆ ಹಲವು. ಇವು ವಾಸ್ತವ ಜಗತ್ತಿನಲ್ಲಿ ಸಿನಿಮಾ ಮಂದಿಯ ಬಗ್ಗೆ ಅಸಹ್ಯವನ್ನು ಹುಟ್ಟುಹಾಕುತ್ತವೆ. ಸಿನಿಮಾ ಜಗತ್ತಿನ ಕೆಲವು ಮಂದಿ ನಿರ್ಧೇಶಕರು,.ನಿರ್ಮಾಪಕರು, ಸಹ ನಿರ್ಧೇಶಕರು , ನಟರು ತೆರೆಯ ಹಿಂದೆ ಎಷ್ಟೋ ಮಂದಿ ಹೆಣ್ಣು ಮಕ್ಕಳ ಬದುಕು ಹಾಳುಮಾಡಿದ ನಿದರ್ಶನವಿದೆ. ಇಂದಿಗೂ ಅದು ಜಾರಿಯಲ್ಲಿದೆ ತೆರೆ ಯಮರೆಯಲ್ಲಿ! ಆದರೆ ವೃತ್ತಿ ಬದುಕು ಕಂಡು ಕೊಳ್ಳುವ ಮಂದಿ ಇದನ್ನೆಲ್ಲಾ ಸಹಿಸಿಕೊಂಡು ಸಿಕ್ಕ ಅವಕಾಶಗಳನ್ನು ಪಡೆದುಕೊಂಡು ಇಂದಿಗೂ ಅತಂತ್ರ ಬದುಕು ಸವೆಸುತ್ತಿದ್ದಾರೆ. ಸಿನಿಮಾ-ನಾಟಕ ನಮ್ಮ ಸಂಸ್ಕೃತಿಯ ಭಾಗ ಅವು ಸಧಭಿರುಚಿಯ ವಿಚಾರಗಳನ್ನು ನಮ್ಮ ನಡುವೆ ಉಳಿಸಬೇಕು, ತರಬೇಕು ಆದರೆ ಇದಕ್ಕೆಲ್ಲಾ ವ್ಯತಿರಿಕ್ತವಾದ ಕ್ರಿಯೆಗಳು ಜಾರಿಯಲ್ಲಿವೆ. ಸಹ್ಯವೆನಿಸುವಂತಹ ವಾತಾವರಣ ಕಣ್ಮರೆಯಾಗಿದೆ ಇದು ಆರೋಗ್ಯವಂತ ಸಮಾಜ ದಲಕ್ಷಣಗಳಲ್ಲ. ಹೇಳೋದು ವೇದಾಂತ ಮಾಡೋದು ಅನಾಚಾರ, ಸಮಾಜಕ್ಕೊಂದು ಮುಖ ಅಂತರಂಗಕ್ಕೆ ಮತ್ತೊಂದು ಮುಖ ಎಂಬಂತಿದೆ ಸಧ್ಯದ ಸ್ಥಿತಿ. ಇಂತಹವೆಲ್ಲಾ ಸಮಾಜದ ಸ್ವಾಸ್ಥ್ಯ ಕೆಡಿಸದೇ ಇರಬಲ್ಲವೇ. ಒಳ್ಳೆಯ ಸಂಗತಿಗಳನ್ನು ಕಾಮಾಲೆ ಕಣ್ಣಿನಿಂದ ನೋಡುವಂತೆ ಇಂತಹ ಸಂಗತಿಗಳು ಮಾಡಬಲ್ಲವಲ್ಲವೇ? ನೀವೇನು ಹೇಳ್ತೀರಿ?

Sunday, December 6, 2009

ಹಿಂಬಾಗಿಲು ಪ್ರವೇಶದ ಗಂಜಿ ಕೇಂದ್ರಗಳು ಬೇಕಾ??

ಇಂತಹದ್ದೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಆಗಾಗ್ಯೆ ಕೇಳಿಬರುತ್ತಿದೆ. ಸರಿಸುಮಾರು 500ಕೋಟಿಗು ಹೆಚ್ಚು ವಾರ್ಷಿಕ ನಿರ್ವಹಣಾ ವೆಚ್ಚ ಹೊಂದಿರುವ 'ಮೇಲ್ಮನೆ' ಎಂಬ ರಾಜಕಾರಣಿಗಳ ಗಂಜಿಕೇಂದ್ರದಿಂದ ಏನು ಪ್ರಯೋಜನವಾಗಿದೆ? ಅವರು ಮೇಲ್ಮನೆಯಲ್ಲಿ ನೀಡುವ ಸಲಹೆ,ಸೂಚನೆಗಳಿಗೆ ಯಾವ ಕಿಮ್ಮತ್ತು ಲಭಿಸಿದೆ, ವಿಶೇಷ ಸಂಧರ್ಭದಲ್ಲಿ ನೀಡುವ ವರದಿಗಳ ಕಥೆ ಏನಾಗಿದೆ? ರಾಜಕೀಯದ ಲವಲೇಶವೂ ಇಲ್ಲದೇ ವ್ಯವಸ್ಥೆಯ ವಿವಿಧ ಸ್ಥರಗಳಿಂದ ಆಯ್ಕೆಯಾಗುವ 'ಮಹಾಮಹಿಮ'ರು ಮೇಲ್ಮನೆಗೆ ಬಂದು ಸಾಧಿಸಿರುವುದಾದರೂ ಏನು? ಈ ಮೇಲ್ಮನೆಯಿಂದ ಯಾರಿಗೆ ಪ್ರಯೋಜನವಾಗಿದೆ? ಎಂಬುದು ಚರ್ಚಾರ್ಹ ವಿಚಾರ. ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಂದಿದೆ. ಈ ಸಂಧರ್ಭ ಇಂತಹದ್ದೊಂದು ಚರ್ಚೆ ಹೆಚ್ಚು ಪ್ರಸ್ತುತವೆನಿಸಿಸುತ್ತದೆ.
ಮೊದಲಿಗೆ 'ವಿಧಾನ ಪರಿಷತ್' ಎಂದರೇನು? ಎಂದರೇನು? ಎಂಬುದನ್ನು ನೋಡೋಣ. ಪ್ರಜಾಪ್ರಭುತ್ವದ ರಾಜಕೀಯ ವ್ಯವಸ್ಥೆಯಲ್ಲಿ ಕೇಂದ್ರದಲ್ಲಿ ರಾಜ್ಯಸಭೆ ಇರುವಂತೆ ರಾಜ್ಯಗಳಲ್ಲಿ ವಿಧಾನಸಭೆಗೆ ಗಳಿಗೆ ದೇಶದ ಆರು ರಾಜ್ಯಗಳಲ್ಲಿ ಮಾತ್ರ ವಿಧಾನ ಸಭೆ ಅಸ್ತಿತ್ವದಲ್ಲಿದೆ. ರಾಜ್ಯದ ವಿಧಾನ ಸಭೆಗಳಲ್ಲಿ ಹೆಚ್ಚು ಅಂದರೆ ೫೦೦ ಮತ್ತು ಕಡಿಮೆ ಎಂದರೆ ೬೦ ಶಾಸಕ ಸ್ಥಾನಗಳಿರಬಹುದು. ಅತೀ ಕಡಿಮೆ ಶಾಸಕ ಸ್ಥಾನಗಳನ್ನು ಹೊಂದಿರುವ ರಾಜ್ಯಗಳು ಮೂರು ಪಾಂಡಿಚೆರಿ, ಮಿಜೋರಾಂ, ಅರುಣಾಚಲ ಪ್ರದೇಶ. ಈ ರಾಜ್ಯಗಳ ಶಾಸಕ ಸ್ಥಾನಗಳು ಕೇವಲ ೩೦ ಆಗಿದೆ!. ಸಧ್ಯ ದೇಶದ 28ರಾಜ್ಯಗಳ ಪೈಕಿ ಕರ್ನಾಟಕವೂ ಸೇರಿದಂತೆ ಆಂದ್ರಪ್ರದೇಶ, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶಗಳಲ್ಲಿ ಮಾತ್ರ ವಿದಾನ ಪರಿಷತ್ ಗಳು ಅಸ್ತಿತ್ವದಲ್ಲಿವೆ. ಇಂತಹ ವ್ಯವಸ್ಥೆಯನ್ನು ಇರಿಸಿಕೊಳ್ಳುವುದು ಇಲ್ಲವೇ ತೆಗೆಯುವುದು ಆಯಾ ರಾಜ್ಯಗಳ ಶಾಸಕಾಂಗದ ನಿರ್ದಾರಕ್ಕೆ ಒಳಪಟ್ಟಿರುತ್ತದೆ.
ವಿಧಾನ ಸಭೆಯ ಒಟ್ಟು ಸದಸ್ಯರ ೧/೩ ರಷ್ಟು ಸಂಖ್ಯೆಯಲ್ಲಿ ಮೇಲ್ಮನೆಗೆ ಸದಸ್ಯರು ಇರುತ್ತಾರೆ. ಆ ಲೆಕ್ಕಾಚಾರಕ್ಕೆ ಬಂದರೆ ರಾಜ್ಯದಲ್ಲಿರುವ ೨೨೪ ಶಾಸಕರಿಗೆ ಮೇಲ್ಮನೆಯಲ್ಲಿ 75ಮಂದಿ ಸದಸ್ಯರಿರಬೇಕು. ಆದರೆ ಕೇವಲ 72ಮಂದಿ ಸದಸ್ಯರಿದ್ದಾರೆ. ಈ ಪೈಕಿ 23ಮಂದಿ ವಿಧಾನ ಸಭಾ ಸದಸ್ಯರಿಂದ ಚುನಾಯಿತರಾದರೆ, 7ಮಂದಿ ಪಧವಿಧರ ಕ್ಷೇತ್ರ, 7ಮಂದಿ ಶಿಕ್ಷಕರ ಕ್ಷೇತ್ರದಿಂದ, 24ಮಂದಿ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳಿಂದ ಆಯ್ಕೆಯಾಗುತ್ತಾರೆ. ಉಳಿದಂತೆ 11ಮಂದಿಯನ್ನು ಸಾರ್ವಜನಿಕ ವಲಯದ ವಿವಿಧ ಕ್ಷೇತ್ರದಲ್ಲಿ ಹೆಸರು ಮಾಡಿದ ಗಣ್ಯರನ್ನು ನಾಮಕರಣ ಮಾಡಲಾಗುತ್ತದೆ. ಇವರ ಅಧಿಕಾರಾವಧಿ ನಿರಂತರ 6ವರ್ಷ. ಅದೇ ವಿಧಾನ ಸಭಾ ಸದಸ್ಯರಿಗೆ ಕೇವಲ 5ವರ್ಷ. ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಮುಖ್ಯ ಮಂತ್ರಿ , ರಾಜ್ಯಪಾಲರಿಗೆ ಮನವಿ ಮಾಡಿದರೆ 6ತಿಂಗಳು ಮುಂದುವರೆಯಬಹುದು. ಹಾಗೂ 5ವರ್ಷಗಳಿಗೆ ಮುನ್ನವೇ ರಾಜಕೀಯ ಅತಂತ್ರ ಸ್ಥಿತಿ ಉಂಟಾದರೆ ವಿಧಾನ ಸಭೆ ವಿಸರ್ಜಿಸಲ್ಪಡುತ್ತದೆ. ಆದರೆ ಇಂತಹ ಯಾವುದೇ ಗೋಜಲುಗಳು ವಿಧಾನ ಪರಿಷತ್ ಸದಸ್ಯರಿಗಿಲ್ಲ. ಅವರ ಅವಧಿ 6ವರ್ಷ ಅಭಾದಿತ. ಇಂತಹ ಸದಸ್ಯರುಗಳು ಸರ್ಕಾರದ ಹಣಕಾಸು ಮಂಡನೆ ವಿಚಾರ ಚರ್ಚಿಸಬಹುದು, ತಿದ್ದುಪಡಿ ಸೂಚಿಸಬಹುದು, ಅನುಮೋದಿಸಬಹುದು.ಅದೂ ಕೇವಲ 14ದಿನಗಳ ಅವಧಿಯೊಳಗೆ ವಿನಹ ಯಾವುದೇ ಶಾಸನಾತ್ಮಕ ನಿರ್ಣಯವನ್ನು ಕೈಗೊಳ್ಳುವಂತಿಲ್ಲ. ಇಲ್ಲಿಗೆ ಆಯ್ಕೆಯಾಗುವ ಪ್ರತೀ ಸದಸ್ಯನಿಗೂ ತಲಾ 50ಲಕ್ಷರೂಪಾಯಿಗಳ ಅಭಿವೃದ್ದಿ ಅನುದಾನವನ್ನು ವಾರ್ಷಿಕವಾಗಿ ಕೊಡಲಾಗುತ್ತದೆ. ಅಂದರೆ 6ವರ್ಷಕ್ಕೆ 3ಕೋಟಿ ಅಭಿವೃದ್ದಿ ಅನುದಾನವನ್ನು ವಿವೇಚನಾ ಕೋಟದಲ್ಲಿ ಬಳಸಬಹುದು. ಆಡಳಿತ ನಡೆಸುವ ಸರ್ಕಾರಗಳು ಮಾತ್ರ ಇದಕ್ಕೆ ತದ್ವಿರುದ್ದ. ಈ ಸದಸ್ಯರ ಸಧ್ಯದ ಗೌರವ ಧನ 22500ರೂ.ಗಳಿದ್ದರೆ ಮುಂದಿನ ಜನವರಿವೇಳೆಗೆ ಇದು 44ಸಾವಿರ ರೂಪಾಯಿಗಳಾಗಲಿದೆ. ಮತ್ತು ಓಡಾಟದ ಖರ್ಚಿಗೆ ತಿಂಗಳಿಗೆ 25ಸಾವಿರ, ಸಭಾ ಭತ್ಯೆ ಇತ್ಯಾದಿ ಇದ್ದೇ ಇರುತ್ತೆ. ಇಂತಹದ್ದೊಂದು ವ್ಯವಸ್ಥೆಗೆ ಆಂದ್ರಪ್ರದೇಶದಲ್ಲಿ ಭಾರೀ ವಿರೋಧ ವ್ಯಕ್ತವಾಗಿ ರದ್ದಾಗಿತ್ತು. ಆದರೆ 2007ರಲ್ಲಿ ಇದು ಅಲ್ಲಿ ಮತ್ತೆ ಅಸ್ಥಿತ್ವಕ್ಕೆ ಬಂದಿದೆ.
ಈಗ ಅಸಲು ವಿಷಯಕ್ಕೆ ಬರೋಣ,ಇಂತಹ ವಿಧಾನ ಪರಿಷತ್ ಗಳಿಗೆ ಆಯ್ಕೆಯಾಗುವವರು ಎಂತಹವರು ? ಯಾರ ಹಿತಾಸಕ್ತಿಗಾಗಿ ಇವರೆಲ್ಲ ಮೇಲ್ಮನೆಗೆ ಬರುತ್ತಾರೆ? ಅಲ್ಲಿ ಅವರು ಕಡಿಯೋದೇನು? ಜನ ಸಾಮಾನ್ಯರಿಗೆ ಇವರಿಂದ ಏನು ಉಪಯೋಗ? ಎಂಬ ಪ್ರಶ್ನಯಿದೆ. ವಿಧಾನ ಪರಿಷತ್ ಅನ್ನೊದು ವಿಧಾನ ಸಭೆಗೆ ಒಂದು ಸಲಹಾ ಸಮಿತಿ ಇದ್ದಂತೆ, ಇನ್ನೊಂದು ಅರ್ಥದಲ್ಲಿ ಜನಮಾನಸದಲ್ಲಿ ಸ್ಥಾನ ಕಳೆದುಕೊಂಡ ರಾಜಕಾರಣಿಗಳನ್ನು ಓಲೈಸುವ ಇಲ್ಲವೇ ರಾಜಕಾರಣಿಗಳು ತಮ್ಮ ಹಿಂಬಾಲಕನಿಗೆ ಅಧಿಕಾರಾವಕಾಶ ಮಾಡಿಕೊಡುವ ಹಿಂಬಾಗಿಲು ಪ್ರವೇಶದ ಒಂದು 'ಗಂಜಿಕೇಂದ್ರ'. ಇಂತಹ ಗಂಜಿಕೇಂದ್ರಗಳಿಗೆ ವಿಧಾನಸಭೆ-ಲೋಕಸಬೆ ಚುನಾವಣೆಗಳಲ್ಲಿ ಪಕ್ಷದ ಏಜೆಂಟನಾಗಿ ಜೀತ ಮಾಡಿಕೊಂಡು ಬದುಕುವ ಇಲ್ಲವೇ ಪಾರ್ಟಿಗೆ ದಂಡಿಯಾಗಿ ದುಡ್ಡು ಸುರಿಯುವ ವ್ಯಕ್ತಿಗಳನ್ನು ಚುನಾವಣೆಗೆ ತರಲಾಗುತ್ತದೆ. ಮತ್ತು ನೇರ ಚುನಾವಣೆಯಲ್ಲಿ ಸೋತು ಸುಣ್ಣವಾದವನನ್ನು ಜಾತಿಯ ದೃಷ್ಟಿಯಿಂದ ಓಲೈಸಿ ಮೇಲ್ಮನೆ ಚುನಾವಣೆಗೆ ತರಲಾಗುತ್ತದೆ. ಇಲ್ಲಿಯೂ ರಾಜಕೀಯ ಹಿತಾಸಕ್ತಿಯಿಂದ ವಿವಿಧ ರಾಜಕೀಯ ಪಕ್ಷಗಳ ಒಳ ಒಪ್ಪಂದಗಳ ಮೂಲಕ ತಮ್ಮ ಬೇಳೆ ಬೇಯಿಸಿ ಕೊಳ್ಳುತ್ತವೆ. ದುಡ್ಡು ಸುರಿದು ಸದಸ್ಯನಾದವನು ತನ್ನ ಬಂಡವಾಳ ಶಾಹಿ ಸಾಮ್ರಾಜ್ಯದ ರಕ್ಷಣೆಗೆ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡರೆ ಮುಖಂಡರುಗಳ ಹಿತಾಸಕ್ತಿಯಿಂದ ಆಯ್ಕೆಯಾದವನು ಸ್ವತಂತ್ರ ವಿವೇಚನೆ ಇಲ್ಲದೇ ಆಯಾ ಪಕ್ಷದ ಮುಖಂಡರ ಇಲ್ಲವೇ ಪಕ್ಷದ ನೆರಳಿನಲ್ಲಿ ಜೀತದಾಳಿನಂತೆ ಆದೇಶ ಪಾಲಿಸುತ್ತಾನೆ. ಇಂತಹ ಸದಸ್ಯರುಗಳಿಂದ ಯಾವ ಜನೋಪಯೋಗಿ ಕೆಲಸಗಳು ನಡೆಯುಲು ಸಾಧ್ಯ ?ಅಷ್ಟಕ್ಕೂ ತಮಗೆ ಕೊಟ್ಟ ಅಭಿವೃದ್ದಿ ಅನುದಾನ, ಅವಕಾಶಗಳನ್ನು ರಾಜ್ಯದ ಎಷ್ಟು ಮಂದಿ ವಿಧಾನ ಪರಿಷತ್ ಸದಸ್ಯರು ಸಮರ್ಪಕವಾಗಿ ಜನಸೇವೆ ಗೆ ಬಳಸುತ್ತಾರೆ. ವಿಧಾನ ಪರಿಷತ್ ಸದಸ್ಯರುಗಳೆಂದರೆ ಕೊಟ್ಟಿಗೆಯಲ್ಲಿ ಕಟ್ಟಿದ ಗೊಡ್ಡು ಹಸುಗಳು!. ಇಂತಹ ಗೊಡ್ಡು ದನಗಳಿಂದ ಯಾವ ಪ್ರಯೋಜನವೂ ಆಗಲಾರದು. ಈಗ ನಡೆಯುತ್ತಿರುವ ಮೇಲ್ಮನೆ ಚುನಾವಣೆಗಳಲ್ಲಿ ನೇರ ಹಣಾಹಣಿ ಇರುವೆಡೆ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳಿಗೆ ೧೦೦೦ ದಿಂದ ೫೦೦೦ ರೂಗಳವರೆಗೆ ನೀಡಿ ಪ್ರತೀ ಪ್ರತೀ ಮತಗಳನ್ನು ಖರಿದಿಸಲಾಗುತ್ತಿದೆಯೆಂಬ ಸುದ್ದಿ ಇದೆ. ಹೀಗೆ ದುಡ್ಡು ಚೆಲ್ಲಿ ಆಯ್ಕೆಯಾಗುವವರಿಂದ ನಾವು ನಿರೀಕ್ಷಿಸುವುದಾದರೂ ಏನನ್ನು? ನೀವೇ ಹೇಳಿ? ಇಂತಹದ್ದೊಂದು ವ್ಯವಸ್ಥೆಗೆ ಕೋಟಿರೂ. ಗಳ ವೆಚ್ಚವನ್ನು ಯಾಕಾದರೂ ಮಾಡಬೇಕು? ಅದಕ್ಕೆ ಹೇಳಿದ್ದು ಹಿಂಬಾಗಿಲು ಪ್ರವೇಶದ ಗಂಜಿಕೇಂದ್ರ ಬೇಕಾ??

Sunday, November 29, 2009

ಜಾಗತೀಕರಣದ ಬಿಸಿಯಲ್ಲಿ ಬದುಕುಗಳಅವಸಾನ!

ಜಾಗತೀಕರಣದ ಬಿಸಿ ನಿದಾನವಾಗಿ ಸುಡಲಾರಂಭಿಸಿದೆ, ಕಳೆದ ವರ್ಷ ಅಮೇರಿಕಾದ ಆರ್ಥಿಕ ಕುಸಿತ, ಈಗ ದುಬೈನ ಆರ್ಥಿಕ ಹಿಂಜರಿತ ದೇಶದ ಆರ್ಥಿಕತೆಯ ಮೇಲೆ ಉದ್ಯೋಗಗಳ ಮೇಲೆ ಪರಿಣಾಮ ಬೀರಲಾರಂಬಿಸಿದೆ. ದಶಕಗಳ ಹಿಂದೆ ಇದೇ ಮನಮೋಹನ ಸಿಂಗ್,ಪ್ರಧಾನಿಯಾಗಿದ್ದ ನರಸಿಂಹರಾವ್ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದಾಗ ಮುಕ್ತ ಆರ್ಥಿಕ ಉದಾರೀಕರಣದ ಮೂಲಕ ಬಹುರಾಷ್ಟ್ರೀಯ ಉದ್ಯಮಗಳಿಗೆ ದೇಶದ ಹೆಬ್ಬಾಗಿಲನ್ನು ತೆರೆದಿಟ್ಟರು. ಆಗ ಅದನ್ನು ಸಮರ್ಥವಾಗಿ ವಿರೋಧಿಸುವ ಯಾವ ಕ್ರಿಯೆಗಳು ಬಲವಾಗಿ ನಡೆಯಲಿಲ್ಲ, ಅನೇಕ ಸಾರ್ವಜನಿಕ ಚಳುವಳಿಗಳು ಅದನ್ನ ವಿರೋದಿಸಿದವಾದರೂ ಎಂಎನ್ ಸಿಗಳ ಭಿಕ್ಷೆ ಮತ್ತು ಎಂಜಲನ್ನು ಪಡೆದು ಬಾಯಿ ಭದ್ರ ಪಡಿಸಿಕೊಂಡವು. ಅಲ್ಲಿಗೆ ವ್ಯವಸ್ಥಿತವಾಗಿ ನಮ್ಮ ಬದುಕಿನೊಳಗೆ ಜಾಗತೀಕರಣದ ಕಬಂಧ ಬಾಹು ಆಕ್ಟೋಪಸ್ ನಂತೆ ವಿಸ್ತರಿಸಲಾರಂಭಿಸಿತು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆಧುನೀಕರಣದ ಭ್ರಮೆಗೆ ಬಿದ್ದ ನಮ್ಮ ಜನ ಕೂಡ ಅದನ್ನು ಅನಿವಾರ್ಯವೆಂದು ಭಾವಿಸಲಾರಂಭಿಸಿದರು. ನಮ್ಮ ಜನರಿಗೆ ಸಿನಿಕತನ ಬೆಳೆಯಿತು, ತಮ್ಮ ತಲೆಮಾರುಗಳಿಂದ ಪಾಲನೆಯಾಗುತ್ತಿದ್ದ ಜೀವ ನಕ್ರಮವನ್ನು ಮರೆತರು, ಪದ್ದತಿಗಳನ್ನು ಸಿದ್ದಾಂತಗಳನ್ನು ಗಾಳಿಗೆ ತೂರಿದರು. ಆಧುನೀಕರಣವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಸಮರ್ಥಿಸಿಕೊಳ್ಳಲಾರಂಬಿಸಿದರು, ಬದುಕನ್ನುಬದಲಿಸಿಕೊಳ್ಳಲಾರಂಭಿಸಿದರು. ಆದರೆ ಅವತ್ತಿಗೆ ಜಾಗತೀಕರಣದ ಬಿಸಿ ತಕ್ಷಣವೇ ನಮ್ಮನ್ನು ನಡುಬೀದಿಯ ಭಿಕ್ಷುಕರನ್ನಾಗಿ ಮಾಡುತ್ತದೆ, ಬದುಕು ಮೂರಾಬಟ್ಟೆಯಾಗುತ್ತದೆ ಎಂಬ ಸ್ಪಷ್ಟ ಸುಳಿವನ್ನು ನಿರ್ಲಕ್ಷಿಸಿದರು. ಅವತ್ತಿಗೆ ಅವತ್ತಿನ ಬದುಕು ಖುಷಿಯಾಗಿದ್ದರೆ ಸಾಕು ಎಂಬ ಮನಸ್ಥಿತಿ ನಮ್ಮ ಜನರಲ್ಲಿದ್ದುದೇ ಈಗ ಆರಂಭವಾಗಿರುವ ತಳಮಳ, ತಲ್ಲಣಗಳಿಗೆ ಕಾರಣವಾಗಿದೆ.
ನಿಮಗೆ ತಿಳಿದಿರಲಿ ಮುಕ್ತ ಆರ್ಥಿಕ ಉದಾರೀಕರಣ ನೀತಿ ಎಂದರೆ ಜಗತ್ತಿನ ಬಲಾಡ್ಯ ರಾಷ್ಟ್ರಗಳು ಅಭಿವೃದ್ದಿ ಯನೆಪದಲ್ಲಿ ಇತರೆ ರಾಷ್ಟ್ರಗಳ ಮೇಲೆ ಬಲವಂತವಾಗಿ ಹೇರಲ್ಪಡುವ ನೀತಿ. ಇದರನುಸಾರ ಸದರಿ ಗುಂಪಿನಲ್ಲಿರುವ ಯಾವುದೇ ರಾಷ್ಟ್ರ ನಮ್ಮ ದೇಶದಲ್ಲಿ ಬಂಡವಾಳ ಹೂಡಬಹುದು. ಅದೂ ಶಾಶ್ವತವಾಗ ಉಳಿಯುವಂತಹ ವ್ಯವಹಾರಗಳ ಮೇಲಲ್ಲ ತಾತ್ಕಾಲಿಕ ಗುತ್ತಿಗೆ ಅವಧಿಯವರೆಗೆ ಮಾತ್ರ. ಹೀಗೆ ಬಂಡವಾ ಳಹೂಡುವವರಿಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯ , ರಕ್ಷಣೆ ಹಾಗೂ ತೆರಿಗೆ ರಹಿತ ವಾದ ವ್ಯವಸ್ಥೆಯನ್ನ ಕಲ್ಪಿಸಿಕೊಡಬೇಕು. ಅಲ್ಲಿ ಉತ್ಪಾದನೆಯಾಗುವ ಉತ್ತಮಗುಣಮಟ್ಟದ ಪದಾರ್ಥಗಳು ನಮ್ಮವರಿಗೆ ಸಿಗಲಾರದು, ದೇಶೀಯ ಉದ್ಯೋಗ ನೀತಿ ಅವರಿಗೆ ಅನ್ವಯಿಸಲಾರದು, ನಮ್ಮ ದೇಶದ ಕಾನೂನು ಕಟ್ಟಳೆಯಲ್ಲೂ ಅವರಿಗೆ ಸಡಿಲತ ಇರುತ್ತದೆ ಸರ್ಕಾರವೇ ಅವ ರರಕ್ಷಣೆಗೆ ಮುಂದಾಗಿ ನಿಲ್ಲುತ್ತವೆ. ದೇಶದ ಪ್ರಜಾಸತ್ತೆ ವ್ಯವಸ್ಥೆಗೆ ಇದು ಸಂಪೂರ್ಣ ವಿರುದ್ದ.
ಹೀಗೆ ಜಾಗತೀಕರಣದ ನೆರಳಿನಲ್ಲಿ ನಮ್ಮ ದೇಶಕ್ಕೆ ಕಾಲಿರಿಸಿದ್ದು ಟೆಕ್ಸ್ ಟೈಲ್ಸ್ ಅಂಡ್ ಗಾರ್ಮೆಂಟ್ ಇಂಡಸ್ಟ್ರಿ, ಮೆಟಲ್ ಅಂಡ್ ಮೆಟಲ್ ಉತ್ಪಾದನೆಗಳು, ಮಾಹಿತಿ ತಂತ್ರಜ್ಞಾನ ಪಾರ್ಕುಗಳು, ಹೊರಗುತ್ತಿಗೆ ಉದ್ದಿಮೆಗಳು, ಜೆಮ್ಸ್ ಅಂಡ್ ಜ್ಯೂಯಲರಿ, ಕಟ್ಟಡ ನಿರ್ಮಾಣ, ಸಾರಿಗೆ, ಅದಿರು, ಕಲಿದ್ದಲು, ತೈಲ ಉದ್ದಿಮೆಗಳು ಪ್ರಮುಖವಾದವುಗಳು . ಕಳೆದ ವರ್ಷಅಮೇರಿಕಾ ಆರಂಭಿಸಿದ ಬಂಡವಾಳ ಹಿಂತೆಗೆತದ ಪರಿಣಾಮ ದೇಶದ ೧.5ಮಿಲಿಯನ್ ನಷ್ಟು ಜನರು ಉದ್ಯೋಗ ಕಳೆದುಕೊಂಡರು. ದೇಶದ ಕಾರ್ಮಿಕ ಇಲಾಖೆಯ ಸರ್ವೆ ಅನುಸಾರ ದೇಶದ 11ರಾಜ್ಯಗಳಲ್ಲಿರುವ ೨೦ ಪ್ರಮು ಖವಾಣಿಜ್ಯ ಕೇಂದ್ರಗಳಲ್ಲಿ 2581ಘಟಕಗಳು ಕಣ್ಮುಚ್ಚಿದವು. ಈಗ ಉದ್ಯೋಗ ವಂಚಿತ ಭಾರತೀಯರ ಸಂಖ್ಯೆ ಏರುಗತಿಯಲ್ಲಿದ್ದು ಅದು ೧೬.2ಮಿಲಿಯನ ್ಆಗಿದೆ. ಈಗ ದುಬೈನಲ್ಲಿ ಸಂಭವಿಸಿರುವ ಆರ್ಥಿಕ ಕುಸಿತ ನಮ್ಮ ದೇಶದ ಆರ್ಥಿಕತೆಗೂ ದೊಡ್ಡ ಪೆಟ್ಟು ನೀಡಿದೆ. ದುಬೈನಲ್ಲಿರು ವಭಾರತೀಯರು ಅಲ್ಲಿ ನಜನಸಂಖ್ಯೆಯ ಶೇ.43ರಷ್ಟಿದ್ದಾರೆ. ಅಲ್ಲಿ ಉದ್ದಿಮೆ ನಡೆಸುವವರು, ನೌಕರರಾಗಿ, ಕಾರ್ಮಿಕರಾಗಿ ಕೆಲಸ ಮಾಡುವವರು ಬಹುತೇಕ ನಮ್ಮವರೇ ಆಗಿದ್ದಾರೆ. ನಮ್ಮ ದೇಶದ ಹಲವ ಉತ್ಪನ್ನಗಳ ಗ್ರಾಹಕರು ಆಗಿರುವುದರಿಂ ದ ದೇಶದ ಆರ್ಥಿಕತೆಗೂ ಬಾರೀ ಪೆಟ್ಟು ಬೀಳಲಿದೆ.
ಜಾಗತೀಕರಣ ಕಾಲಿರಿಸುತ್ತಿದ್ದಂತೆ ನಮ್ಮ ಕೃಷಿ ಭೂಮಿಗಳು ಆರ್ಥಿಕವಲಯದ ಪಾಲಾಗುತ್ತಿವೆ, ದೇಶೀಯ ಉತ್ಪನ್ನಗಳು ಮೂಲೆಗುಂಪಾಗಿವೆ, ಆಧುನೀಕರಣದ ಪ್ರಭಾವದಿಂದಾಗಿ ಇರುವ ಕೃಷಿ ಭೂಮಿಗಳು ಬರಡಾಗುತ್ತಿವೆ, ಶಿಕ್ಷಣದ ಆದ್ಯತೆಗಳು ಬದಲಾಗಿವೆ, ಸಂಬಂಧಗಳು ಯಾತ್ರಿಕವಾಗಿವೆ, ಅಭಿರುಚಿ-ಸಂಸ್ಕೃತಿ ಬದಲಾಗಿದೆ, ಭಾಷಾ ವ್ಯವಸ್ಥೆ ದಿಕ್ಕೆಟ್ಟು ಹೋಗಿದೆ, ಪ್ರಗತಿ ಪರ ಚಳುವಳಿಗಳನ್ನು ವ್ಯವಸ್ಥಿತವಾಗಿ ಕೆಡವಲಾಗಿದೆ, ಅಪರಾಧಗಳು ಹೆಚ್ಚಿವೆ, ಸಾಮಾಜಿಕ ನ್ಯಾಯ ದಿಕ್ಕಾಪಾಲಾಗಿದೆ, ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇದೆಲ್ಲದರ ನಡುವೆ ಇದ್ದಕ್ಕಿದ್ದಂತೆ ಎಂಎನ್ ಸಿಗಳಲ್ಲಿ ಕೆಲಸ ಕಳೆದುಕೊಂಡು ಬದುಕಿನ ಭರವಸೆಯನ್ನು ಕಳೆದುಕೊಂಡವರೆಷ್ಟ ಜನರೋ. ಇವತ್ತು ನಾವು ದೈನಂದಿ ನಜೀವನದಲ್ಲಿ ಬಳಸುವ ಪ್ರತೀ ವಸ್ತುವೂ ಚಡ್ಡಿ-ಬನೀನು ಸೇರಿದಂತೆ ಎಲ್ಲ ಪದಾರ್ಥಗಳು ವಿದೇಶಿ ಸಹಯೋಗದ ಕಂಪನೆಗಳ ಬಳುವಳಿಯೇ. ಅದ ನಮ್ಮನ್ನು ಎಷ್ಟು ಆವರಿಸಿಕೊಂಡಿದೆಯಂದರೆ ನೀರಿನ ಮಡುವಿನಿಂ ದಹೊರಬರಲಾರದಷ್ಟು. ನಮಗೆ ಅಧುನೀಕರಣ ಬೇಕು, ಉದ್ಯೋಗ ಬೇಕು, ಅಭಿವೃದ್ದಿ ಬೇಕು ಆದರೆ ನಮ್ಮ ತನವನ್ನು ಹರಾಜಿಗಿಟ್ಟುಕೊಳ್ಳುವ ವ್ಯವಸ್ಥೆಯಲ್ಲ.ಎಲ್ಲಿ ದೇಸೀ ಜೀವನ ಪ್ರೀತಿ ಇಲ್ಲವೋ , ಬದ್ದತೆ, ಸಿದ್ದಾಂತಗಳಿರುವುದಿಲ್ಲವೋ ಅಲ್ಲಿಯವರೆಗೂ ಜಾಗತೀಕರಣದ ಭೂತ ನಮ್ಮನ್ನು ಹಿಂಬಾಲಿಸುತ್ತಲೇ ಇರುತ್ತದೆ.

Friday, November 20, 2009

ಪೊಲೀಸರ ರಕ್ಷಣೆಯಲ್ಲಿ ಪತ್ರಕರ್ತ ಇರಬೇಕಾ??

ಕಳೆದ ಕೆಲವು ತಿಂಗಳಿಂದ 'ವಿಜಯ ಕರ್ನಾಟಕ' ದಿನಪತ್ರಿಕೆಯಲ್ಲಿ, ವೃತ್ತಿಯಲ್ಲಿ ನಾನು ಕೈಗೊಂಡಿರುವ ಕ್ರಮ ಮತ್ತು ಬೆಂಗಳೂರು ಪೊಲೀಸ್ ಇಲಾಖೆಯ ಕಾರ್ಯ ನಿರ್ವಹಣೆ ಕುರಿತು ಹಲವಾರು ಪ್ರತಿಕೂಲ ವರದಿಗಳು ಪ್ರಕಟವಾಗಿರುತ್ತವೆ. ಬೆಂಗಳೂರು ಆವೃತ್ತಿಯ(ದಿ:17/11/2009 ರ ವಿ.ಕ) ಪುಟಗಳಲ್ಲಿ "ಕಾನೂನು ಎಷ್ಟಕ್ಕೆ ಬಿಕರಿಯಾಗಿತ್ತು ಹೇಳಿ ಬಿದರಿಯವರೇ? ಶೀರ್ಷಿಕೆಯಡಿಯಲ್ಲಿ ಪ್ರಕಟವಾಗಿರುವ ಲೇಖನವನ್ನು ಗಮನಿಸಿದ್ದೇನೆ. ನೀವು ದಿ.30/06/2009 ರಂದು ತಮ್ಮ ಅಂಗರಕ್ಷಕರನ್ನಾಗಿ ಪೊಲೀಸರನ್ನು ನಿಯೋಜಿಸಲು ಅರ್ಜಿ ಸಲ್ಲಿಸಿರುವುದು ಸರಿಯಷ್ಟೇ. ಈ ಬಗ್ಗೆ ಸೂಕ್ತ ವಿಚಾರಣೆ ನಡೆಸಿ , ವರದಿಯ ಆಧಾರದ ಮೇಲೆ ನಿಮಗೆ ಪೊಲೀಸ್ ಅಂಗರಕ್ಷಕರನ್ನು ನಿಯೋಜಿಸುವುದು ಸರಿಯಲ್ಲ ಎಂಬ ನಿರ್ದಾರಕ್ಕೆ ನಾನು ಬಂದಿರುವ ವಿಷಯ ನಿಮಗೆ ಗೊತ್ತಿದೆ. ಈ ಬಗ್ಗೆ ತಮ್ಮ ಪತ್ರಿಕಾ ವರದಿಗಾರರು ಮತ್ತು ಹಲವು ಉನ್ನತ ಮೂಲಗಳಿಂದ ಸಾಕಷ್ಟು ಒತ್ತಡ ಬಂದಿದ್ದರೂ ನಾನು ನನ್ನ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಈ ಕಾರಣದಿಂದಲೇ ಕೆಲವು ತಿಂಗಳಿನಿಂದ ನಾನು ಕೈಗೊಂಡ ವೃತ್ತಿಪರ ಕ್ರಮಗಳ ಬಗ್ಗೆ ಮತ್ತು ಬೆಂಗಳೂರು ಪೊಲೀಸ್ ಕಾರ್ಯ ನಿರ್ವಹಣೆಯ ಕುರಿತು ಹಲವಾರು ಪ್ರತಿಕೂಲ ವರದಿಗಳು 'ವಿಕ'ದಲ್ಲಿ ಪ್ರಕಟವಾಗಿರುತ್ತವೆ. ಮತ್ತು ಈ ಲೇಖನವೂ ಸಹಾ ಅದೇ ಕಾರಣದಿಂದ ಪ್ರಕಟವಾಗಿದೆ ಎಂದು ನಾನು ನಂಬಲು ಬಲವಾದ ಕಾರಣಗಳಿವೆ. ಆದರೂ ಸಹಿತ ಪತ್ರಿಕಾ ಧರ್ಮವನ್ನು ತಿಳಿದಿರುವ ತಾವು, ಈ ತರಹದ ಕೃತ್ಯವನ್ನು ಎಸಗುವುದಿಲ್ಲ ಎಂದು ನಂಬಲು ಪ್ರಯತ್ನಿಸುತ್ತಿದ್ದೇನೆ.
ಈ ನನ್ನ ಪ್ರತಿಕ್ರಿಯೆಯಿಂದ ತಮ್ಮ ಪತ್ರಿಕೆಯಲ್ಲಿ ತಾವು ಸಾಕಷ್ಟು ವಿವಾದಗಳನ್ನು ಸೃಷ್ಟಿಸುವ ಮತ್ತು ಪ್ರತಿಕೂಲ ವರದಿಗಳನ್ನು ಬರೆಯುವ ಸಾಧ್ಯತೆ ಇದೆ ಎಂಬ ಅರಿವು ನನಗೆ ಇದೆ. ಎಂತಹುದೇ ಪ್ರಬಲವಾದ ಪತ್ರಿಕೆಯಾದರೂ ಸಹಿತ ಎಷ್ಟೇ ಪ್ರತಿಕೂಲ ವರದಿಗಳನ್ನು ಪ್ರಕಟಿಸಿದರೂ , ರಾಜ್ಯದ ಜನತೆಯು ಸಾಕಷ್ಟು ವಿವೇಚನೆಯಿಂದ ಮತ್ತು ಸತ್ಯಾಸತ್ಯತೆಯನ್ನು ಪರಿಶೀಲಿಸಿ ಸತ್ಯವನ್ನು ತಿಳಿಯಲು ಶಕ್ತರಾಗಿದ್ದಾರೆ ಎಂದು ನಾನು ನಂಬಿದ್ದೇನೆ.
ಹಲವಾರು ಕಾರಣಗಳಿಂದಾಗಿ 'ವಿಕ' ದಿನಪತ್ರಿಕೆಯು ಇಂದು ರಾಜ್ಯದ ಪ್ರಮುಖ ದಿನಪತ್ರಿಕೆಯಾಗಿ ಹೊರಹೊಮ್ಮಿದೆ. ಈಗ ಅದು ಶತ ಶತಮಾನಗಳಿಂದ ಪತ್ರಿಕಾ ಧರ್ಮವನ್ನು ಪಾಲಿಸಿಕೊಂಡು ಬಂದಿರುವ ಟೈಮ್ಸ್ ಆಫ್ ಇಂಡಿಯಾ ಸಮೂಹಕ್ಕೆ ಸೇರಿದೆ. ಪ್ರತಿಷ್ಟಿತ ಮತ್ತು ಗೌರವಾನ್ವಿತ ಪತ್ರಿಕಾ ಸಮೂಹವಾದ ಟೈಮ್ಸ್ ಆಫ್ ಇಂಡಿಯಾ ಸಮೂಹಕ್ಕೆ ಸೇರಿರುವ 'ವಿಕ' ಪತ್ರಿಕೆ ಪತ್ರಿಕಾ ಧರ್ಮಕ್ಕೆ ಅನುಗುಣವಾಗಿ ನಡೆಯಲಿ ಎಂದು ಆಶಿಸುತ್ತೇನೆ. ಹೀಗೊಂದು ಸುದೀರ್ಘ ಪತ್ರವನ್ನು 'ವಿಕ'ದ ಸಂಪಾದಕ ವಿಶ್ವೇಶ್ವರ ಭಟ್ ಗೆ ಬರೆದದ್ದು ಬೆಂಗಳೂರು ನಗರದ ಪೊಲೀಸ್ ಆಯುಕ್ತ ಶಂಕರ ಬಿದರಿ. ಎಲ್ಲರಿಗೂ ತಿಳಿದಂತೆ ಪತ್ರಿಕಾ ಲೋಕದಲ್ಲಿ ಸಂಚಲನ ಹುಟ್ಟಿಸಿದ್ದು, ಕಾಲಾನುಕೂಲಕ್ಕೆ ಬದಲಾಗುತ್ತಾ(ಮುಖಪುಟ, ವಿನ್ಯಾಸ, ಸುದ್ದಿಗಳು ಲೇಖನಗಳು) ಓದುಗರಿಗೆ ಹೊಸತನದ ಮುದ ನೀಡಿತು. ಆ ಮೂಲಕ ಜಡ್ಡು ಕಟ್ಟಿದ ಕನ್ನಡ ಪತ್ರಿಕೋಧ್ಯಮಕ್ಕೂ ಚುರುಕು ಮುಟ್ಟಿಸಿತು. ಪರಿಣಾಮ ಪ್ರಜಾವಾಣಿಯಂತಹ ಪತ್ರಿಕೆ ಕೂಡ ಬದಲಾವಣೆಗೆ ಸಿದ್ಧವಾಯಿತು. ಶತಮಾನದ ಕುರುಹುವಾಗಿರುವ 'ಸಂಯುಕ್ತ ಕರ್ನಾಟಕ' ಪತ್ರಿಕೆ ಸಹಾ ಹೊಸ ವಿನ್ಯಾಸ ಪಡೆಯಿತು. 'ಕನ್ನಡ ಪ್ರಭ'ದ ಮುಖಪುಟದ ಸುದ್ದಿ ಬಿಟ್ಟು ಒಳಗಿನದೆಲ್ಲಾ ಅಜೀರ್ಣವೇ ಸರಿ. ಇಂತಹ ಸನ್ನಿವೇಶದಲ್ಲಿ 'ಟೈಮ್ಸ್ ಆಫ್ ಇಂಡಿಯಾ' ದ ಬೆಂಗಳೂರು ಟೈಮ್ಸ್ ಪುಟದ ಅನುಕರಣೆ ಲವಲವಿಕೆಯೊಂದಿಗೆ 'ವಿಜಯ ಕರ್ನಾಟಕ' ಮತ್ತೊಮ್ಮೆ ಹೊಸ ರೂಪ ತಂದಿದೆ, ಪತ್ರಿಕೆಯ ಅಂಕಣಗಳು ಸುದ್ದಿ ವಿಶ್ಲೇಷಣೆಗಳು ಚೆನ್ನಾಗಿವೆ. ಆದರೆ 'ವಿಕ' ಎಲ್ಲೋ ಒಂದು ಕಡೆ ಇನ್ನೂ ಸಂಘ ಪರಿವಾರದ ಮುಖವಾಣಿಯಂತಿದೆ.
ವಿಶ್ವೇಶ್ವರ ಭಟ್ ಚಿಕ್ಕ ವಯಸ್ಸಿಗೆ ಮೀರಿದ ಹಲವು ಸ್ಥಾನಗಳನ್ನೇ ಅಲಂಕರಿಸಿದವರು ನಿರೀಕ್ಷೆಗೂ ಮೀರಿದ ವೇಗದಲ್ಲಿ ಬೆಳೆದವರು ಪತ್ರಿಕೆಯನ್ನು ಬೆಳೆಸಿದ್ದಾರೆ. ಆದರೆ ಪತ್ರಕರ್ತನಿಗಿರುವ ಇಗೋ ಜಾಗೃತಗೊಂಡರೆ ಆಗಬಹುದಾದ ಅನಾಹುತ ಮತ್ತು ಅದಕ್ಕಿಂತ ದೊಡ್ಡ ಅಪಾಯ ಮತ್ತೊಂದಿರಲಾರದು. ನಮ್ಮ ಭಟ್ಟರ ವಿಷಯದಲ್ಲೂ ಇಂತಹ ಇಗೋ ಕೆಲಸ ಮಾಡಿರುವ ಸಾಧ್ಯತೆ ಇದೆ. ಕೇಂದ್ರದಲ್ಲಿ ಮಂತ್ರಿಯಾಗಿದ್ದ ಅನಂತಕುಮಾರ್ ಗೆ ಮಾಧ್ಯಮ ಸಲಹೆಗಾರರಾಗಿದ್ದ ಭಟ್ಟರು, ರಾಷ್ಟ್ರಪತಿ ಅಬ್ದುಲ್ ಕಲಾಂ ಜೊತೆ ವಿದೇಶ ಪ್ರವಾಸದಲ್ಲೂ ಜೊತೆಯಾಗಿದ್ದರಲ್ಲದೇ ಹಲವು ಉತ್ತಮ ಬರಹಗಳನ್ನು, ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಹೆಮ್ಮೆ ಅವರಿಗಿದೆ, ಓದಿದ ಖುಷಿ ನಮಗೂ ಇದೆ!. ಇಂತಿಪ್ಪ ಭಟ್ಟರು ಒಮ್ಮೆ ಅಡ್ವಾಣಿಯವರು ರಾಜ್ಯಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿ ನಡವಳಿಕೆ ಹೇಗಿರಬೇಕು, ಹೇಗೆ ನಡೆದುಕೊಳ್ಳಬೇಕು, ನಮ್ಮವರು ಹೇಗೆ ಸಿಡುಕುತ್ತಾರೆ ಏನೆಲ್ಲ ತಪ್ಪು ಮಾಡುತ್ತಾರೆ ಅದರ ಅಡ್ಡ ಪರಿಣಾಮವೇನು? ಎಂದೆಲ್ಲಾ ವಿವರವಾಗಿ ಬರೆದಿದ್ದರು. ಇದು ಪರೋಕ್ಷಾಗಿ ಮುಖ್ಯ ಮಂತ್ರಿ ಯಡಿಯೂರಪ್ಪನವರಿಗೆ ಉರಿಹತ್ತುವಂತೆ ಮಾಡಿತ್ತು. ಯಾಕೆಂದರೆ ಭಟ್ಟರ 'ಪೂರ್ವಾಪರ'ಗಳ ಸ್ಪಷ್ಟ ಅರಿವಿದ್ದ ಯಡ್ಡಿ ಸದರಿ ವರದಿಯಿಂದ ಕಂಗೆಟ್ಟು ಭಟ್ಟರಿಗೆ ಫೋನಾಯಿಸಿ ಜನ್ಮ ಜಾಲಾಡಿದ್ದರು. ಭಟ್ಟರಿಗೆ ಬೆವರಿಳಿದಿತ್ತು,(ಭಟ್ಟರು ಅನಂತಕುಮಾರ ಬೆಂಬಲಿಗರು ಅದಕ್ಕೆ ಹೀಗೆಲ್ಲ ಬರೆಯುತ್ತಿರಬಹುದು ಎಂಬು ಅವರ ಸಿಟ್ಟಿಗೆ ಕಾರಣವಾಗಿತ್ತು) ಆದರೆ ವಾಸ್ತವದಲ್ಲಿ ಭಟ್ಟರ ಉದ್ದೇಶ ಆ ರೀತಿ ಇರಲಿಲ್ಲ.
ಕೆಲ ವರ್ಷಗಳ ಹಿಂದೆ 'ಟೈಮ್ಸ್' ಗ್ರೂಪಿಗೆ ಸೇರ್ಪಡೆಗೊಂಡ ನಂತರ 'ವಿಕ'ದ ಖದರ್ರು ಬೇರೆಯಾಗಿದೆ. ಅಂತೆಯೇ ಭಟ್ಟರ ಖದರ್ರು ಸಹಾ. ಆದ್ದರಿಂದಲೇ ಅವರಿಗೆ ಅಂಗರಕ್ಷಕರನ್ನು ಹೊಂದುವ ಐಡಿಯಾ ಹೊಳೆದಿದೆ. ಸರಿ ಅದನ್ನು ಕಾರ್ಯರೂಪಕ್ಕೆ ತರಲು ಶತಾಯ ಗತಾಯ ಪ್ರಯತ್ನಿಸಿದ್ದಾರೆ. ಆದರೆ ಶಿಸ್ತು ಹಾಗೂ ದಿಟ್ಟತನಕ್ಕೆ ಹೆಸರಾದ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶಂಕರ ಬಿದರಿಯವರು ಭಟ್ಟರ ಕೋರಿಕೆಯನ್ನು ಸಾರಾ ಸಗಟಾಗಿ ತಿರಸ್ಕರಿಸಿದ್ದಾರೆ. ಇದರಿಂದ ಭಟ್ಟರು ವಿಚಲಿತರಾದಂತಿದೆ. ರವಿಬೆಳಗೆರೆಯಂತಹ ಪತ್ರಕರ್ತರೇ ಆತ್ಮರಕ್ಷಣೆಗಾಗಿ ಪರವಾನಗಿ ಹೊಂದಿದ ಪಿಸ್ತೂಲು ಮತ್ತು ತಮ್ಮ ಪತ್ರಿಕಾ ಕಛೇರಿಗೆ ತಮ್ಮದೇ ಆದ ಭದ್ರತಾ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಹಾಗಿರುವಾಗ ಭಟ್ಟರಿಗೆ ಅಂಗರಕ್ಷಕರನ್ನು ಹೊಂದುವ ಅವಸರ ಮತ್ತು ಅವಶ್ಯಕತೆ ಏನಿತ್ತೋ ತಿಳಿಯುತ್ತಿಲ್ಲ. ವಿಶ್ವೇಶ್ವರಭಟ್ಟರು ಪ್ರಾಜ್ಞ ಮನಸ್ಥಿತಿಯ, ಸಂವೇದನಾ ಶೀಲ ಗುಣವುಳ್ಳವರು ಹಾಗಿದ್ದೂ ಹೀಗೇಕೆ ಮಾಡಿಕೊಂಡರೋ ? ಜನಮಾನಸದಲ್ಲಿ ಸ್ಥಾನ ಪಡೆದ ಪತ್ರಿಕೆಗೆ ಜನತೆಯ ಬೆಂಬಲವೂ ಸದಾ ಇರುತ್ತದೆ. ಇಂತಹ ಸನ್ನಿವೇಶದಲ್ಲಿ ಪತ್ರಕರ್ತ ಗಟ್ಟಿಗೊಳ್ಳುತ್ತಾನೆ. ಆತನಿಗೆ ಸಂವಿಧಾನ ರಕ್ಷಣೆ ಬೇಕು. ಅದಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ಚಿಂತನೆ ನಡೆಯಬೇಕು. ಪತ್ರಕರ್ತರಿಗೆ ಕಾನೂನು ಬೆಂಬಲ ದಕ್ಕಿಸಿಕೊಳ್ಳುವ ಬಗ್ಗೆ ಪ್ರಯತ್ನವಾಗಬೇಕು. ಆದರೆ ತೀರಾ ಪೊಲೀಸ್ ರಕ್ಷಣೆಯಲ್ಲಿ, ಅಂಗರಕ್ಷಕರನ್ನಿಟ್ಟುಕೊಂಡು ಪತ್ರಕರ್ತರು ಓಡಾಡುವಂತಾಗ ಬಾರದು. ಅದು ಪತ್ರಿಕಾ ಧರ್ಮಕ್ಕೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯೇ ಸರಿ. ಹಾಗಂತ ಒಂದು ಜನಮಾನಸದ ಪತ್ರಿಕೆಯನ್ನು ವೈಯುಕ್ತಿಕ ವಿಚಾರಕ್ಕೆ ಬಳಸಿಕೊಳ್ಳುವುದು ಖಂಡಿತಾ ಸರಿಯಾದುದಲ್ಲ ಹೌದಲ್ವಾ?

Sunday, November 15, 2009

ದೌರ್ಜನ್ಯ ವಕೀಲಿಕೆಯ ಭಾಗವಾಗಿದೆಯೇನೋ ಎಂಬ ಅನುಮಾನ!


" ದೌರ್ಜನ್ಯ ವಕೀಲಿಕೆಯ ಭಾಗವಾಗಿದೆಯೇನೋ ಅನ್ನುವ ಅನುಮಾನ ಶುರುವಾಗಿದೆ,ನಿತ್ಯವೂ ಕಕ್ಷಿದಾರರ ಮೇಲೆ ವಿವಿಧ ರೀತಿಯ ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ! ಅಪರೂಪಕ್ಕೊಮ್ಮೆ ಮಾಧ್ಯಮದವರ ಮೇಲೂ ದೌರ್ಜನ್ಯವಾಗಿದೆ. ನ್ಯಾಯವಾದಿಗಳು ನ್ಯಾಯಕ್ಕಾಗಿ ಹೋರಾಡುವುದಷ್ಟೇ ಅಲ್ಲ, ಅವರ ಹೋರಾಟದ ಹಾದಿಯೂ ನ್ಯಾಯ ಮಾರ್ಗದಲ್ಲಿರಲಿ!! "ಹೀಗೆಂದವರು ಜೀ ಕನ್ನಡ ವಾಹಿನಿಯ ಮಧುಸೂಧನ್. ಹೌದು ಇಂತಹದ್ದೊಂದು ಮಾತನ್ನು ಒಪ್ಪಬೇಕಾ? ಯಾಕೆ ಹೀಗೆ ಪುನರಾವರ್ತನೆಯಾಗುತ್ತಿದೆ? ಕಾನೂನು ಎಲ್ಲರಿಗೂ ಒಂದೇ ಅಲ್ಲವಾ? ಕರಿಕೋಟು ತೊಟ್ಟವರು ಏನು ಮಾಡಿದರೂ ನಡೆಯುತ್ತದೆ ಎಂಬ ಭಾವನೆ ಯಾಕೆ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ?? ಎಂಬೆಲ್ಲ ಪ್ರಶ್ನೆಗಳು ಪುನಹ ಕಾಡಿದ್ದು ಕಳೆದ ವಾರದ ಬೆಳವಣಿಗೆಯ ನಂತರ.

ಹೌದು ಯಾಕೆ ಹೀಗೆ ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ, ಕಾರ್ಯಾಂಗ,ಶಾಸಕಾಂಗ ಪ್ರಧಾನವಾಗಿದ್ದರೆ ಪ್ರತ್ಯೇಕವಾಗಿ ಪ್ರಜಾಪ್ರಭುತ್ವದ ಕಾವಲು ನಾಯಿಯಂತಿರುವುದು ಪತ್ರಿಕಾರಂಗ. ಇಲ್ಲಿ ಯಾರು ಹೆಚ್ಚು , ಯಾರು ಕಡಿಮೆ ಎಂಬ ವಿಚಾರಗಳ ಅವಲೋಕನ ಅನಗತ್ಯ. ಅವರವರದೇ ನೆಲೆಗಟ್ಟಿನಲ್ಲಿ ಅವರು ಹೆಚ್ಚು ಶಕ್ತರು ಹಾಗೂ ಸಮಾಜದಲ್ಲಿ ಜನಸಾಮಾನ್ಯರನ್ನು ಪ್ರತಿನಿಧಿಸುವವರು. ಎಲ್ಲರಿಗೂ ಅವರವರದೇ ಆದ ಗುರುತರ ಹೊಣೆಗಾರಿಕೆಗಳು ಇವೆ. ಹೀಗಿರುವಾಗ ಪರಸ್ಪರರನ್ನು ಗೌರವಿಸುವ, ಮತ್ತು ವಿಶ್ವಾಸಕ್ಕೆ ತೆಗೆದುಕೊಳ್ಳುವ ಜವಾಬ್ದಾರಿ ಇರುತ್ತದೆ. ಅದೇ ಸಮಯದಲ್ಲಿ ಬಾಹ್ಯವಾಗಿ ನಮ್ಮ ನಡವಳಿಕೆಗಳು ಹೇಗೆ ಇರಬೇಕೆಂಬುದನ್ನು ಸಹಾ ಅರಿಯ ಬೇಕಾಗುತ್ತದೆ, ಯಾಕೆಂದರೆ ಅದು ಒಟ್ಟು ಸಮಾಜದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಹಾಗಾಗದಂತೆ ತಡೆಯಬೇಕಾದುದು ಪರಸ್ಪರರ ಕರ್ತವ್ಯ ಕೂಡ! ಆ ನಿಟ್ಟಿನಲ್ಲಿ ಕಳೆದ ವಾರ ಬೆಂಗಳೂರಿನ ಹೈಕೋರ್ಟ್ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಯೊಬ್ಬರ ಮೇಲೆ ನಡೆದ ಹಲ್ಲೆ ಹೆಚ್ಚು ಪ್ರಸ್ತುತವೆನಿಸುತ್ತದೆ ಕೂಡಾ. ಪ್ರಸಕ್ತ ಸಂಧರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಹಲ್ಲೆ ಮಾಮೂಲು ಸಂಗತಿಯಾಗಿದೆ, ಆದರೆ ಸಮಾಜದ ಒಂದು ಪ್ರಜ್ಞಾವಂತ ಗುಂಪಿನಿಂದ ಸಾರ್ವಜನಿಕ ಹಲ್ಲೆ ಕಾನೂನು ಮೀರಿ ನಡೆದಾಗ ಅದು ಪ್ರಶ್ನಾರ್ಹವೇ ಆಗಿದೆ. ರಾಜ್ಯದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಸಿ ದಿನಕರನ್ ಅಕ್ರಮ ಆಸ್ತಿಗಳಿಸಿದ್ದಾರೆ ಹಾಗಾಗಿ ಅವರನ್ನು ಸುಪ್ರಿಂ ಕೋರ್ಟ್ ನ್ಯಾಯಾಧೀಶರ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಬೇಕು , ಅವರು ನ್ಯಾಯಾಲಯ ಕಲಾಪಗಳನ್ನು ನಡೆಸಬಾರದು ಎಂದು ಪ್ರತಿಭಟನೆ ನಡೆಸಿದರು. ಅದೂ ಕೋರ್ಟ್ ಆವರಣದಲ್ಲಿ ಮತ್ತು ಕಲಾಪ ನಡೆಯುವ ವೇಳೆ, ಕೆಲವು ನ್ಯಾಯಾಧೀಶರನ್ನು ಕೊಠಡಿಯೊಳಗೆ ಕೂಡಿಹಾಕಿದ್ದಲ್ಲದೇ, ಅಡ್ಡಿ ಪಡಿಸುವ ಯತ್ನವಾಗಿ ರಾಷ್ಟ್ರಗೀತೆಯನ್ನು ಹಾಡಲಾಯಿತು. ಈ ಸಂಧರ್ಭದಲ್ಲಿ ಸ್ಥಳಕ್ಕೆ ಧಾವಿಸಿದ ಮಾಧ್ಯಮ ಪ್ರತಿನಿಧಿಗಳು ಘಟನೆಯನ್ನು ಕಂಡರು ದೃಶ್ಯವಾಹಿನಿಗಳವರು ಚಿತ್ರೀಕರಿಸಿಕೊಂಡರು, ಅದು ಜನ ಸಾಮಾನ್ಯರ ಹಿತಾಸಕ್ತಿಯಿಂದ. ಆದರೆ ಇದನ್ನು ಸಹಿಸದ ಕೆಲವು ದುಷ್ಕರ್ಮಿ ವಕೀಲರುಗಳು( ಕ್ಷಮಿಸಿ ಎಲ್ಲರೂ ಅಲ್ಲ) ಸಿಎನ್ ಎನ್ ಐ ಬಿ ಎನ್ ಚಾನಲ್ ನ ಛಾಯಾಗ್ರಾಹಕ ವೆಂಕಟೇಶ್ ಮೇಲೆ ಹಲ್ಲೆ ನಡೆಸಿ ಬಟ್ಟೆ ಹರಿದರು, ಹಲವು ಪತ್ರಕರ್ತರನ್ನು ಮನಬಂದಂತೆ ಥಳಿಸಿದರು. ಇದು ವಕೀಲರುಗಳ ಹೋರಾಟದ ನ್ಯಾಯವಾದ ಮಾರ್ಗವೇ? ಇರಲಿ ಸ್ವಲ್ಪ ವಿಷಯಾಂತರ ಮಾಡೋಣ ಇಂತಹ ಹಲ್ಲೆಗಳು ಕೇವಲ ವಕೀಲರಿಂದ ಮಾತ್ರವೇ ಸಂಭವಿಸುತ್ತಿಲ್ಲ. ಸಮಾಜದ ಗಣ್ಯರೆನಿಸಿಕೊಂಡವರಿಂದಲೂ ಹಲ್ಲೆಗಳು ನಡೆದಿವೆ. ಕೆಲ ವರ್ಷಗಳ ಹಿಂದೆ ಮೈಸೂರಿನ ಪತ್ರಕರ್ತ ಸಂತೋಷ ನಡುಬೆಟ್ಟನನ್ನು ಚಾಮುಂಡಿ ಬೆಟ್ಟದ ಹಾದಿಯಲ್ಲಿ ಕ್ಷುಲ್ಲಕ ವಿಷಯಕ್ಕೆ ನಟ ಪುನೀತು ಬಡಿದಿದ್ದ, ನಾಗರಹೊಳೆ ಅರಣ್ಯದಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಅಣ್ಣಯ್ಯ ಎಂಬಾತ ಈ ಟಿವಿ ಗೆಳೆಯರನ್ನು ಬಡಿದು ಕ್ಯಾಮೆರಾ ಹಾಳುಗೆಡವಿದ್ದ, ಹಾಸನದಲ್ಲಿಯೂ ಕೆಲವು ವಕೀಲರುಗಳಿಂದ ಪತ್ರಕರ್ತರ ಮೇಲೆ ದೌರ್ಜನ್ಯ ನಡೆದಿತ್ತು, ಮೊನ್ನೆ ಮೊನ್ನೆ ಶುಭಾಪೂಂಜಾ ಜೊತೆ ಕಾಣಿಸಿಕೊಂಡ ನಟ ವಿಜಯ್ ದೃಶ್ಯ ಮಾಧ್ಯಮದವರನ್ನು ತಡವಿಕೊಂಡಿದ್ದ ಹೀಗೆ ಅಂಕೆಗೆ ಸಿಗದಷ್ಟು ಲೆಕ್ಕದಲ್ಲಿ ಪತ್ರಕರ್ತರ ಮೇಲೆ ದೌರ್ಜನ್ಯ ನಿರಂತರವಾಗಿದೆ. ಯಾವ ಪ್ರಕರಣದಲ್ಲೂ ಇದುವರೆಗೂ ನ್ಯಾಯ ದಕ್ಕಿಲ್ಲ ಎಂಬುದು ದುರಂತದ ಸಂಗತಿಯೇ ಸರಿ. ಈ ಪ್ರಕರಣ ಕುರಿತು ಹೇಳಿಕೆ ನೀಡಿರುವ ರಾಜ್ಯದ ಕಾನೂನು ಸಚಿವ ಪ್ರಕರಣ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದರೆ ಫಲಿತಾಂಶ ಮಾತ್ರ ಇನ್ನೂ ಆಗಿಲ್ಲ.

ಇಂತಹ ಸಂಧರ್ಭದಲ್ಲಿ ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ ಮಾಧ್ಯಮಗಳ ಕುರಿತು ಮೀಡಿಯಾ ಮಿರ್ಚಿ ಅಂಕಣ ಬರೆಯುವ, ಮಾದ್ಯಮ ಲೋಕದ ಒಳ-ಹೊರಗನ್ನು ಬಲ್ಲ ಸೂಕ್ಷ ಪ್ರಜ್ಞೆಯ ಜಿ ಎನ್ ಮೋಹನ್ ಮಾಧ್ಯಮ ಮಿತ್ರ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ ಅಭಿಪ್ರಾಯ ಸೂಚಿಸುವಂತೆ ಕೋರಿದ್ದರು, ಈ ಮೇರೆಗೆ ಮೀಡಿಯಾ ಮಿರ್ಚಿ ಅಂತರ್ಜಾಲ ತಾಣದಲ್ಲಿ ಹಲವು ಗಣ್ಯರು, ಪತ್ರಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ, ಆ ಪ್ರತಿಕ್ರಿಯೆಗಳನ್ನು ಒಟ್ಟು ಮಾಡಿ ರಾಜ್ಯಪಾಲರಿಗೆ ಅರ್ಪಿಸಿ ಪತ್ರಕರ್ತರಿಗೆ ರಕ್ಷಣೆ ಕೋರುವ ಸ್ತುತ್ಯಾರ್ಹ ಪ್ರಯತ್ನ ಮಾಡುತ್ತಿದ್ದಾರೆ, ಆದರೆ ಕಾನೂನು ಸಚಿವರ ಹೇಳಿಕೆಯಿಂದ ತೃಪ್ತರಾದಂತಿರುವ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಇನ್ನೂ ತೂಕಡಿಕೆಯಲ್ಲಿದೆ, ಇದು ಸರಿಯಲ್ಲ. ಕಾನೂನು ಎಲ್ಲರಿಗೂ ಒಂದೇ ಅದು ಯಾರಪ್ಪನ ಮನೆಯ ಆಸ್ತಿಯೂ ಅಲ್ಲ ಹಾಗಾಗಿ ಅದನ್ನು ಪ್ರತಿನಿಧಿಸುವವರೂ ಕೂಡ ಒಂದು ತೂಕದಿಂದ ನಡೆದುಕೊಂಡರೆ ಒಳಿತು ಇಲ್ಲವಾದಲ್ಲಿ ವ್ಯವಸ್ಥೆ ಅವರ ವಿರುದ್ಧ ತಿರುಗಿ ಬೀಳುವ ದಿನಗಳು ದೂರವಿಲ್ಲ ಎಂಬುದನ್ನು ಅರಿಯಬೇಕಲ್ಲವೇ?

ಕೊನೆ ಮಾತು: ರಾಜ್ಯದಲ್ಲಿ ಈಗ ಉದ್ಯೋಗ ಖಾತ್ರಿ ಯೋಜನೆ ಜಾರಿಯಲ್ಲಿದೆ ಇದು ಜನ ಸಾಮಾನ್ಯರಿಗೆ ಉದ್ಯೋಗ ಒದಗಿಸುವ ಬದಲು ಪಂಚಾಯತ್ ವ್ಯವಸ್ಥೆಯ ಅಧಿಕಾರಿಗಳು ಮತ್ತು ಇಂಜಿನಿಯರುಗಳ ಜೋಳಿಗೆ ತುಂಬಿಸುವ ಅಕ್ಷಯ ಯೋಜನೆಯಾಗಿದೆ. ದೇಶದ ೩.೫೨ ಕೋಟಿ ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವ ಮಹತ್ತರ ಯೋಜನೆ. ರಾಜ್ಯದಲ್ಲಿ 13.50855ಕೋಟಿ ಜನರಿಗೆ ಉದ್ಯೋಗ ಒದಗಿಸುವ ಗುರಿ ಹೊಂದಲಾಗಿದೆ. ಆರಂಭದಲ್ಲಿ ಯೋಜನೆಯ ಕಠಣ ಮಾರ್ಗಸೂಚಿಗಳಿಂದ ಕುಂಟುತ್ತಾ ಸಾಗಿದ್ದ ಯೋಜನೆ , ಈಗ ಸಡಿಲಗೊಂಡಿರುವ ಮಾರ್ಗದರ್ಶಿಸೂತ್ರಗಳಿಂದ ಅಧಿಕಾರ/ರಿ ಶಾಹಿಗಳ ಮತ್ತು ಕಂಟ್ರಾಕ್ಟುದಾರರ ಅಕ್ಷಯ ಪಾತ್ರೆಯಾಗಿ ಪರಿವರ್ತನೆಯಾಗಿದೆ. ಪ್ರಸ್ತುತ ಹಾಸನ ಜಿಲ್ಲೆಯಲ್ಲಿ ಇಂದಿನವರೆಗೆ ಕೇವಲ 14ಕೋಟಿರೂಪಾಯಿಗಳ ಕೆಲಸ ವಾಗಿದೆ ಆದರೆ ಮಾದ್ಯಮಗಳ್ಲಲಿ ಮಾತ್ರ ಜಿ.ಪಂ. ನ ಹಿರಿಯ ಅಧಿಕಾರಿಗಳು ಮತ್ತು ಅಧ್ಯಕ್ಷ/ಉಪಾಧ್ಯಕ್ಷರುಗಳು ಸಾರ್ವಜನಿಕರಿಗೆ ೨೫-30ಕೋಟಿ ಕೆಲಸವಾಗಿದೆಯೆಂಬ ಸುಳ್ಳುಹೇಳುತ್ತಿದ್ದಾರೆ. ಜಿಲ್ಲೆಯಾಧ್ಯಂತ ಹಲವೆಡೆ ಜನಸಂಖ್ಯೆಗನುಗುಣವಾಗಿ ಕ್ರಿಯಾ ಯೋಜನೆ ತಯಾರಿಸುವ ಬದಲು ದುಡ್ಡು ಮಾಡಲು ಕ್ರಿಯಾಯೋಜನೆ ತಯಾರಿಸಲಾಗಿದೆ. ಇದಕ್ಕೆ ಸ್ಪಷ್ಟ ಪಾರದರ್ಶಕ ಉದಾಹರಣೆಯೆಂದರೆ ಕೆರೆ ಅಭಿವೃದ್ದಿ ಕ್ರಿಯಾ ಯೋಜನೆಗಳು. ಶೇ.೨೦ ಜೆಸಿಬಿ ಬಳಸುತ್ತೇವೆಂದು ಹೇಳಲಾಗುತ್ತಿದ್ದರೂ ಶೇ.100ರಷ್ಟು ಜೆಸಿಬಿ ಬಳಕೆಯಾಗಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲವಾಗಿದೆ, ಅವರ ಜಾಬ್ ಕಾರ್ಡುಗಳು ಕಂಟ್ರಾಕ್ಟರುಗಳ ಬಳಿ ಇಲ್ಲವೇ ವಾರ್ಡು ಸದಸ್ಯರುಗಳ ಬಳಿ ಸಂಗ್ರಹವಾಗಿವೆ. ಕೆಲಸ ಮಾಡದೇ, ಅರೆಬರೆ ಕೆಲಸ ಮಾಡಿ ಲಕ್ಷಾಂತರ ರೂ ಕೊಳ್ಳೆ ಹೊಡೆಯಲಾಗಿದೆ.ಈ ಬಗ್ಗೆ ಪ್ರಶ್ನಿಸಿದರೆ ಆ ಬಗ್ಗೆ ದೂರುಕೊಡಿ ಪರಿಶೀಲಿಸುತ್ತೇವೆ ಎಂಬ ಹೊಣೆಗೇಡಿತನದ ಉತ್ತರ ನೀಡುತ್ತಾರೆ. ಜಿಲ್ಲಾ ಕೇಂದ್ರದಲ್ಲಿ ಕುಳಿತು ಮಜಾ ಉಡಾಯಿಸುವ ಅಧಿಕಾರಿ, ಜನಪ್ರತಿನಿಧಿ ಇದುವರೆಗೂ ಎಷ್ಟು ತಾಲೂಕುಗಳಿಗೆ, ಎಷ್ಟು ಪಂಚಾಯ್ತಿಗಳಿಗೆ ಮತ್ತು ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ? ತಪ್ಪಿತಸ್ಥರ ವಿರುದ್ಧ ಏನು ಕ್ರಮವಾಗಿದೆಯೆಂಬ ಬಗ್ಗೆ ಉತ್ತರವಿಲ್ಲ. ಗ್ರಾಮಪಂಚಾಯಿತಿಗಳಿಗೆ ಸುವರ್ಣ ಗ್ರಾಮ ಯೋಜನೆ ಸೇರಿದಂತೆ ಇನ್ನಿತರ ಅಭಿವೃದ್ದಿ ಯೋಜನೆಗಳು ಜಾರಿಯಲ್ಲಿವೆ. ಇಲ್ಲಿ ಒಂದೇ ಕೆಲಸಕ್ಕೆ ಹಲವು ಯೋಜನೆಗಳನ್ನು ಸೇರಿಸಿ ಹಾಡುಹಗಲೇ ಜನಸಾಮಾನ್ಯರ ಹಣ ದೋಚಲಾಗುತ್ತಿದೆ. ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಕಾವೇರಿ ನೀರಾವರಿ ನಿಗಮ, ಜಲಾನಯನ ಹೀಗೆ ಇತರೆ ಇಲಾಖೆಗಳಲ್ಲಿ ಅನುಷ್ಠಾನಗೊಳ್ಳುವ ಉದ್ಯೋಗ ಖಾತ್ರಿ ಯೋಜನೆ ಲೆಕ್ಕಕ್ಕೆ ಸಿಗುವುದೇ ಇಲ್ಲ.ಇದೆಲ್ಲದರ ನಡುವೆ ರಾಮ-ಕೃಷ್ಣ ನ ಲೆಕ್ಕ ದಂತೆ ಆಗುವ-ಆಗದ ಕೆಲಸಗಳಿಗೆ ಎಂಬಿ ಬರೆಯುವ ಜಿ.ಪಂ. ಇಂಜಿನಿಯರುಗಳು ಕೋಟಿಗೆ ತೂಗುತ್ತಿದ್ದಾರೆ ಇಂತಿಷ್ಟು ಎಂದು %ಕೊಟ್ಟರೆ ಮುಗಿಯಿತು. ಅಸಲಿಗೆ ಸದರಿ ಯೋಜನೆ ನಮ್ಮ ಜಿಲ್ಲೆಗೆ ಅಗತ್ಯವೇ ಇರಲಿಲ್ಲ. ಆದರೂ ಬಂದ ಯೋಜನೆಯನ್ನಾದರೂ ಸರಿಯಾದ ರೀತಿಯಲ್ಲಿ ಜಾರಿಗೆ ತರಲು ಭ್ರಷ್ಠಾಚಾರದಿಂದ ಮುಕ್ತವಾಗಿ ನಿರ್ವಹಿಸಲು ಅಧಿಕಾರಿಗಳಿಗೇನು ದಾಡಿ ಬಂದಿದೆ?

Tuesday, November 10, 2009

ಶಂಕರ್ ನಾಗ್ ನೆನಪಿಗೊಂದು ವೆಬ್ ಸೈಟು!

ಶಂಕರ್ ನಾಗ್ ಒಬ್ಬ ವ್ಯಕ್ತಿಯಾಗಿ, ಶಕ್ತಿಯಾಗಿ ನಾಡಿನ ಜನಮನದಲ್ಲಿ ಅಜರಾಮರ. ಯಾವುದೇ ಸ್ಟಾರ್ ಗಿರಿಯ ಹಂಬಲವಿಲ್ಲದೇ ತನ್ನದೇ ಆದ ಆಲೋಚನೆಗಳಿಗೆ ರೂಪು ಕೊಡುತ್ತಾ, ಹೊಸ ಚಿಂತನೆಗಳನ್ನು ಹರವಿಕೊಳ್ಳುತ್ತಾ ಸಾರಸ್ವತ ಲೋಕದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ಧೀಮಂತ. ನಾಟಕದ ಹುಚ್ಚು ಹತ್ತಿಸಿಕೊಂಡು ಇದ್ದ ಬ್ಯಾಂಕ್ ಆಫ್ ಇಂಡಿಯಾದ ನೌಕರಿಗೆ ತಿಲಾಂಜಲಿ ಇಟ್ಟು ಕನಸುಗಳನ್ನು ಕಟ್ಟಿದ, ಕನಸನ್ನು ನಿಜ ಮಾಡಿದ, ತಾನೂ ಬೆಳೆದ, ತನ್ನೊಂದಿಗೆ ಹಲವರನ್ನು ಬೆಳೆಸಿದ, ವ್ಯವಸ್ಥೆಯಲ್ಲಿ ಒಂದು ಹೊಸ ಸಂಚಲನವನ್ನು ಹುಟ್ಟುಹಾಕಿದ ಸಾಹಸಿ ಆತ! ಬದುಕಿದ್ದು 3ದಶಕಗಳಾದರೂ ಸಾಧಿಸಿದ್ದು ಮತ್ತು ನಮ್ಮೊಂದಿಗೆ ಬಿಟ್ಟು ಹೋಗಿದ್ದು ಎಂದೆಂದಿಗೂ ಮರೆಯಲಾಗದ ಕನಸುಗಳ ಸಾಕಾರವನ್ನು ಹೊಸ ಸಂಚಲನದ ಸೃಷ್ಟಿಯನ್ನು. ಶಂಕರ್ ಗೆ ಅಂತ ಒಂದು ಅಭಿಮಾನಿ ಸಂಘವಿರಲಿಲ್ಲ ಆದರೆ ಆತ ತನ್ನ ನಾಟಕಗಳ ಮೂಲಕ ಜಗತ್ತಿನ ಹಲವು ದೇಶಗಳನ್ನು ಸುತ್ತಿದ್ದ. ದೇಶಿ ಪರಂಪರೆಯನ್ನು ವಿದೇಶದಲ್ಲೂ ಪಸರಿಸಿದ್ದ, ಒಂದೇ ಒಂದು ಟೆಲಿ ಸೀರಿಯಲ್ ಸ್ವಾಮಿ ಅಂಡ್ ಹಿಸ್ ಪ್ರೆಂಡ್ಸ್ ಆತನಿಗೆ ಜಾಗತಿಕ ಖ್ಯಾತಿಯನ್ನು ತಂದು ಕೊಟ್ಟಿತು. ದೇಶದಲ್ಲಿಯೇ ಮೊದಲನೆಯದು ಎನ್ನುವಂತಹ ಕಂಟ್ರಿಕ್ಲಬ್ ನಿರ್ಮಿಸಿದ ಶಂಕರ್ ಒಂದೊಳ್ಳೆಯ ಪತ್ರಿಕೆಯನ್ನು, ನಮ್ಮದೇ ಆದ ಕನ್ನಡದ ಛಾನಲ್ ಅನ್ನು, ಬಡವರಿಗೆ ಕಡಿಮೆ ಬೆಲೆಯ ಮನೆಯನ್ನು, ನಂದಿ ಬೆಟ್ಟಕ್ಕೆ ರೋಪ್ ವೇ ಯನ್ನು, ಮೆಟ್ರೋ ರೈಲು ಯೋಜನೆಗೆ ಹೀಗೆ ಬಿಡುವಿಲ್ಲದ ಕನಸುಗಳನ್ನು ಕಟ್ಟಿಕೊಂಡಿದ್ದ . ಆದರೆ ಸಾಧಿಸುವುದು ಇನ್ನು ಇದೆಯೆನ್ನುವಾಗಲೇ ವಿಧಿ ಅವರನ್ನು ಸೆಳೆದು ಕೊಂಡು ಬಿಟ್ಟಿತು. ಇಂತಹ ಶಂಕರ್ ನಾಗ್ ನೆನಪಿಗಾಗಿ ಅವರ ಜನ್ಮ ದಿನವಾದ ನವೆಂಬರ್ 9ರಂದು ಹಿರಿಯ ಪತ್ರಕರ್ತ ರಾದ ಎಂ ಕೆ ಭಾಸ್ಕರ ರಾವ್ "ಶಂಕರ್ ನಾಗ್" ವೆಬ್ ಸೈಟನ್ನು ಸೃಜಿಸಿದ್ದಾರೆ. ನವೆಂಬರ್ 9ರಂದು ಅದು ಚಾಲನೆಗೊಂಡಿದೆ. ಖ್ಯಾತ ನಾಟಕಕಾರ ಗಿರಿಶ್ ಕಾರ್ನಾಡ್ ಅದನ್ನು ಉದ್ಘಾಟಿಸಿದ್ದಾರೆ. ಅಲ್ಲಿ ಶಂಕರ್ ನೆನಪಿನ ಅಪರೂಪದ ವಿವರಣೆಯಿದೆ, ಚಿತ್ರ ಸಂಪುಟವಿದೆ, ಕೆಲವು ಆಯ್ದ ಚಿತ್ರಗಳ ಲಿಂಕ್ ನೀಡಲಾಗಿದೆ. ನೀವೂ ಒಮ್ಮೆ ಭೇಟಿ ನೀಡಿ. ವಿಳಾಸ ಹೀಗಿದೆ. ಶಂಕರ್ ನಾಗ್ . ಇನ್. ಹಾಗೆ ಮತ್ತೊಂದು ವಿಚಾರ ಪ್ರಸಿದ್ದ ಅಂತರ್ ಜಾಲ ತಾಣ ಫೇಸ್ ಬುಕ್ ನಲ್ಲೂ ಶಂಕರ್ ನಾಗ್ ಫ್ಯಾನ್ ಕ್ಲಬ್ ಇದೆ, ಅಲ್ಲಿ ವಿಶೇಷವಾಗಿ ಶಂಕರ್ ಬಗ್ಗೆ ಚರ್ಚೆ ಸಂವಾದ ಇರುತ್ತೆ ಅಲ್ಲಿಗೂ ಹೋಗಿ ಬನ್ನಿ.

Sunday, November 1, 2009

ಅನ್ನದ ಭಾಷೆ ಎಂದರೇನು? ಕನ್ನಡ ಎಲ್ಲಿದೆ ಗೊತ್ತಾ???

ವರಕವಿ ದ.ರಾ. ಬೇಂದ್ರೆ ಮೈಸೂರಿನ ಮಹಾರಾಜ ಕಾಲೇಜಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ಕುವೆಂಪು ರವರೊಂದಿಗೆ ತೆಗೆಸಿದ ಫೋಟೋ
ಅನ್ನದ ಭಾಷೆ ಎಂದರೇನು? ಕನ್ನಡ ಎಲ್ಲಿದೆ? ಇಂತಹದ್ದೊಂದು ಪ್ರಶ್ನೆ ಕೇಳಿಕೊಳ್ಳುವ ದುರ್ಗತಿ ಸ್ವಾಭಿಮಾನಿ ಕನ್ನಡಿಗರದ್ದು ಅದು ದೌರ್ಭಾಗ್ಯದ ಸಂಗತಿಯೂ ಹೌದು. ಹಾಗಾದರೆ ಸ್ವಾಭಿಮಾನಿ ಗಳಲ್ಲದ ಕನ್ನಡಿಗರು ಯಾರು? ಇಂತಹ ವಿಭಿನ್ನ ಮನೋಭಾವದ ಗುಂಪು ಯಾಕೆ ಸೃಷ್ಟಿಯಾಗಿದೆ? ಇದರ ಪರಿಣಾಮಗಳೇನು? ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡ ಪ್ರೀತಿ ಯಾಕೆ ಜಾಗೃತವಾಗಬೇಕು? ಕನ್ನಡದ ಹೆಸರಿನಲ್ಲಿ ಇವತ್ತು ಏನೆಲ್ಲ ಆಗುತ್ತಿದೆ? ಯಾರ್ಯಾರು ಯಾವ ಯಾವ ರೀತಿಯ ಲಾಭ ಲೆಕ್ಕಾಚಾರಗಳನ್ನು ಕನ್ನಡ ಭಾಷೆಯನ್ನು ಮುಂದಿಟ್ಟುಕೊಂಡು ಮಾಡುತ್ತಿದ್ದಾರೆ? ಸರ್ಕಾರಗಳು ಏನು ಮಾಡುತ್ತಿವೆ? ಈ ನಡುವೆ ನಮ್ಮ ಕನ್ನಡಿಗರ ಮನಸ್ಥಿತಿ ಹೇಗಿದೆ? ನಮ್ಮ ಕನ್ನಡ ಸಂಸ್ಕೃತಿಗೆ ಯಾವ ರೀತಿಯ ಧಕ್ಕೆಯಾಗಿದೆ? ನಮ್ಮ ಕನ್ನಡವನ್ನು ಯಾಗಿಗೆಲ್ಲ ಅಡ ಇಡಲಾಗಿದೆ? ಮುಂದಿನ ದಿನಗಳಲ್ಲಿ ಇದರ ಪರಿಣಾಮಗಳೇನು? ಎಂಬೆಲ್ಲಾ ಪ್ರಶ್ನೆಗಳು ಬೇತಾಳನಂತೆ ನಮ್ಮನಾವರಿಸಿವೆ. ಆದರೆ ಇವೆಲ್ಲಾ ಪ್ರಶ್ನೆಗೆ ಉತ್ತರ ಹುಡುಕಾಡುವವರು ಮಾತ್ರ ಅದೇ ಸ್ವಾಭಿಮಾನಿ ಕನ್ನಡಿಗರು! ಕನ್ನಡ ಭಾಷೆಗೆ, ಕನ್ನಡ ಸಂಸ್ಕೃತಿಗೆ , ಕನ್ನಡ ಜನರ ಹಿತಾಸಕ್ತಿಗೆ ನಮ್ಮ ನೆಲದಲ್ಲೆ ನಾವೇ ಹೋರಾಟ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಒನ್ಸ್ ಎಗೈನ್ ಇಂತಹದ್ದೊಂದು ಪರಿಸ್ಥಿತಿಗೆ ಕಾರಣ ವಾಗಿರುವುದು ಮತ್ತದೇ ಜಾಗತೀಕರಣ!!
ಅದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಕಂಡು ಕೊಳ್ಳುವ ಮೊದಲು ನಮ್ಮ ಅನ್ನದ ಭಾಷೆ ಕಸ್ತೂರಿ ಕನ್ನಡದ ಬಗೆಗೆ ಒಂದಿಷ್ಟು ಅರಿಯೋಣ.ಕನ್ನಡ ಭಾಷೆ ಭಾರತದ ದ್ರಾವಿಡ ಭಾಷೆಗಳಲ್ಲಿ ಪ್ರಮುಖವಾದ ಭಾಷೆ, ಸುಮಾರು 40ಮಿಲಿಯನ್ ಜನ ಕನ್ನಡ ಮಾತನಾಡುತ್ತಾರೆ, ಜಾಗತಿಕ ಮಟ್ಟದಲ್ಲಿ ಅತ್ಯಂತ ಹೆಚ್ಚು ಬಳಸಲ್ಪಡುವ ಭಾಷೆಯಾಗಿ ಕನ್ನಡಕ್ಕೆ 27ನೇ ಸ್ಥಾನವಿದೆ. ಕನ್ನಡ ತನ್ನ ಒಡಲಲ್ಲಿ ತುಳು, ಕೊಡವ, ಬ್ಯಾರಿ ಮತ್ತು ಕೊಂಕಣಿ ಭಾಷೆಗಳಿಗೆ ಮಾತೃ ಸ್ಥಾನದಲ್ಲಿದೆ. 1600ವರ್ಷಗಳಷ್ಟು ಹಳೆಯದಾದ ಇತಿಹಾಸ ಹೊಂದಿರುವ ಕನ್ನಡ ಬಾಷೆಯ ಬರವಣಿಗೆ ಪ್ರಾಕಾರ ಆರಂಭವಾಗಿದ್ದು 5ಮತ್ತು 6ನೇ ಶತಮಾನದಲ್ಲಿ. ಕನ್ನಡದ ಪ್ರಥಮ ಶಾಸನ ಹಲ್ಮಿಡಿ ಶಾಸನ ಸಿಕ್ಕ ಮೇಲೆ ಸುಮಾರು 30000ಸಾವಿರಕ್ಕೂ ಹೆಚ್ಚು ಕನ್ನಡದ ಶಾಸನಗಳು ಸಿಕ್ಕಿದ್ದು ಕನ್ನಡದ ಅಸ್ತಿತ್ವ ಎಷ್ಟು ಹಳೆಯದು ಎಂಬುದನ್ನು ಸಾರಿ ಸಾರಿ ಹೇಳುತ್ತವೆ. ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ದೊರಕಿದ್ದು 9ಮತ್ತು 10ನೇ ಶತಮಾನದಲ್ಲಿದ್ದ ರಾಷ್ಟ್ರಕೂಟರ ಆಡಳಿತದಲ್ಲಿ. ಕನ್ನಡದಲ್ಲಿ ಬಂದಷ್ಟು ಸಾಹಿತ್ಯ ಪ್ರಾಕಾರಗಳು ಜಗತ್ತಿನ ಯಾವ ಭಾಷೆಯಲ್ಲೂ ಬಂದಿರಲಾರದು. ಕನ್ನಡದಲ್ಲಿ ದ್ವಿಪದಿಗಳು, ತ್ರಿಪದಿಗಳು,ವಚನ ಸಾಹಿತ್ಯ, ರಗಳೆ, ವ್ಯಾಕರಣ, ಜೈನಸಾಹಿತ್ಯ,ಭಕ್ತಿ ಸಾಹಿತ್ಯ, ದಾಸ ಸಾಹಿತ್ಯ, 15ನೇ ಶತಮಾನ ದಲ್ಲಿ ಬಂದ ಕರ್ನಾಟಕ ಸಂಗೀತ ಪರಂಪರೆ ಹೊಸ ಮೈಲುಗಲ್ಲನ್ನೇ ಸೃಷ್ಟಿಸಿದೆ. 20ನೇ ಶತಮಾನದ ಆಧುನಿಕ ಕನ್ನಡ ಪರಂಪರೆಯಲ್ಲಿ ನವೋದಯ ಸಾಹಿತ್ಯ,ನವ್ಯೋತ್ತರ ಸಾಹಿತ್ಯ, ದಲಿತ ಬಂಡಾಯ ಸಾಹಿತ್ಯ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಮತ್ತು ಸಾಮಾಜಿಕ ಪರಂಪರೆಯನ್ನು ಶ್ರೀಮಂತ ಗೊಳಿಸಿರುವುದಷ್ಟೇ ಅಲ್ಲ ಸೂಕ್ಷ್ಮ ಸಂವೇದನೆಯ ಮೂಲಕ ಜಾಗತಿಕ ಭೂಪಟದಲ್ಲಿ "ಕನ್ನಡ" ಹೊಸ ಸಂಚಲನವನ್ನೇ ಉಂಟುಮಾಡಿದೆ. ಕನ್ನಡದ ಸಾಹಿತಿಗಳಿಗೆ ಇತರೆಲ್ಲ ಭಾಷೆಯ ಸಾಹಿತಿಗಳಿಗಿಂತ ಅತೀ ಹೆಚ್ಚಿನ ಜ್ಞಾನಪೀಠಿಗಳನ್ನು ಪಡೆದಿದೆ. 47ಕ್ಕೂ ಹೆಚ್ಚು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಗಳನ್ನ ಪಡೆದಿದೆ. ಕರ್ನಾಟಕ ರಾಜ್ಯದಲ್ಲಿಯೇ ಕನ್ನಡ ಭಾಷೆಯನ್ನು ೨೦ ಶೈಲಿಗಳಲ್ಲಿ ಮಾತನಾಡುವುದನ್ನು ಕಾಣಬಹುದು. ಅವುಗಳಲ್ಲಿ ವಿಶಿಷ್ಠವಾದುದು ಕುಂದಾಪುರದ ಕುಂದಕನ್ನಡ, ನಾಡವ ಕನ್ನಡ, ಹವ್ಯಕರ ಹವಿಗನ್ನಡ, ಅರೆಭಾಷೆ, ಸೋಲಿಗ ಭಾಷೆ, ಬಡಗ, ಗುಲ್ಬರ್ಗ ಕನ್ನಡ, ದಾರವಾಡ ಕನ್ನಡ, ರಾಯಚೂರು ಕನ್ನಡ, ಮೈಸೂರು ಕನ್ನಡ, ಮಂಡ್ಯ ಕನ್ನಡ, ಮಂಗಳೂರು ಕನ್ನಡ, ಚಿತ್ರದುರ್ಗ ಕನ್ನಡ, ಕೊಳ್ಳೆಗಾಲದ ಭಾಷೆ ಹೀಗೆ ವೈವಿಧ್ಯವಿದೆ. ಯಕ್ಷಗಾನ, ಭರತನಾಟ್ಯ, ಕರ್ನಾಟಕ ಸಂಗೀತ ಜಗತ್ತಿಗೆ ಕರ್ನಾಟಕದ ಹೆಮ್ಮೆಯ ಕೊಡುಗೆ. ಬೇಲೂರು-ಹಳೆಬೀಡು,ಹಂಪೆ, ಶ್ರವಣಬೆಳಗೊಳ,ಪಟ್ಟದಕಲ್ಲು-ಐಹೊಳೆ,ಗೋಲಗುಮ್ಮಟ ದಂತಹ ಅಂತರ ರಾಷ್ಟ್ರೀಯ ಸ್ಮಾರಕಗಳು, ಶ್ರೇಷ್ಠ ಕವಿಗಳು,ಅರಸ ಪರಂಪರೆ, ಮುತ್ಸದ್ದಿ ರಾಜಕಾರಣಿಗಳು, ಕ್ರೀಡಾಪಟುಗಳು, ನಟರು,ನಿರ್ದೇಶಕರು, ಕಲಾವಿದರು ನಮ್ಮಲ್ಲಿದ್ದಾರೆ.
ಇಂತಹದ್ದೊಂದು ಶ್ರೀಮಂತ ಪರಂಪರೆ ಇದ್ದಾಗ್ಯೂ ನಮಗೇಕೇ ಇಂತಹ ದುರ್ಗತಿ? ಕರ್ನಾಟಕ ರಾಜ್ಯ ಪ್ರಾಕೃತಿದತ್ತವಾಗಿ ಸಾಂಸ್ಕೃತಿಕವಾಗಿ ಸಂಪದ್ಭರಿತವಾಗಿದೆ ಹಾಗಾಗಿ ಬಹಳ ಹಿಂದಿನಿಂದಲೂ ಅಕ್ಕಪಕ್ಕದ ರಾಜ್ಯದವರು ಉತ್ತರ ಭಾರತದ ಮಂದಿ ಅಂದರೆ ಆಂಧ್ರ ವಾಳ್ಳುಗಳು,ತಮಿಳು ಕೊಂಗರು,ರಾಜಾಸ್ಥಾನದ ಸೇಟುಗಳು, ಮರಾಠಿಗಳು, ಬಿಹಾರಿಗಳು, ಬಂಗಾಲಿಗಳು, ಮಲೆಯಾಳಿಗಳು, ಉತ್ತರಪ್ರದೇಶದವರು ಹೀಗೆ ಸಮಸ್ತರು ಇಲ್ಲಿ ಬಂದು ನೆಲೆಗೊಂಡರು. ಈ ನಡುವೆ ಜಾಗತೀಕರಣದ ಭೂತದಿಂದಾಗಿ ರಾಜ್ಯದಲ್ಲಿ ಹಲವು ಉದ್ದಿಮೆಗಳು ಸ್ಥಾಪಿಸಲ್ಪಟ್ಟವು. ಬೆನ್ನಲ್ಲೇ ದೇಶ ವಿದೇಶಿಗರ ವಲಸೆಯು ಹೆಚ್ಚಿತು ಪರಿಣಾಮ ನಮ್ಮ ಆಲೋಚನೆಗಳು ಬದುಕಿನ ರೀತಿ ರಿವಾಜುಗಳು ಬದಲಾದವು. ನಮ್ಮ ಸಂಸ್ಕೃತಿಯಲ್ಲಿ ಬದಲಾವಣೆ ಆಯಿತು, ಬಾಷೆಯಿಂದ ವಿಮುಖತೆ ಆಯಿತು ಇದು ಎಷ್ಟರ ಮಟ್ಟಿಗೆ ಇತ್ತೆಂದರೆ ಮಗು ಹುಟ್ಟುತ್ತಲೇ ಅದು ಕನ್ನಡ ಕಲಿತರೆ ತಮಗೆ ಅಪಮಾನ ಎಂದು ತಂದೆತಾಯಿಯರು ಭಾವಿಸುವಂತಾಯಿತು. ಕನ್ನಡೇತರರ ಬಗೆಗಿನ ಅಭಿಮಾನ ಜಾಸ್ತಿಯಾಯಿತು, ಕನ್ನಡ ಶಾಲೆಗಳಿಗಿಂತ ಆಂಗ್ಲಭಾಷೆ ಮಾಧ್ಯಮ ಶಾಲೆಗಳಿಗೆ ಆದ್ಯತೆ ಹೆಚ್ಚಿತು. ರಾಜಕಾರಣಿಗಳು ಮತಬ್ಯಾಂಕಿಗೆ ಇತರೆ ಭಾಷಿಕರನ್ನು ಓಲೈಸಲು ನಿಂತರು. ನಮ್ಮ ನೆಲೆಯಲ್ಲಿ ನಾವೇ ಕನ್ನಡಕ್ಕೆ ಹೋರಾಡುವ ಪರಿಸ್ಥಿತಿಗೆ ಇದೇ ವೇದಿಕೆಯಾಯಿತು. ಕನ್ನಡ ಚಳುವಳಿಯನ್ನು ಇತ್ತೀಚಿನ ದಿನಗಳಲ್ಲಿ ಯಶಸ್ವಿಯಾಗಿ ಪ್ರವರ್ದಮಾನಕ್ಕೆ ತಂದ ನಾರಾಯಣಗೌಡರು ಕನ್ನಡದ ರಕ್ಷಣೆಗೆ ರಕ್ಷಣಾ ವೇದಿಕೆ ಹುಟ್ಟುಹಾಕಿದರೆ, ಇತರರನೇಕರು ಹೊಟ್ಟೆ ಪಾಡಿಗೆ ಅದೇ ಮಾದರಿಯ ಸಂಘಟನೆಗಳನ್ನು ಹುಟ್ಟುಹಾಕಿದರು. ಕನ್ನಡ ರಕ್ಷಣೆಗೆ ಬದಲಾಗಿ ಸುಲಿಗೆಗೆ ನಿಂತು ಆ ಮೂಲಕ ಕನ್ನಡ ಚಳುವಳಿಯನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ. ರಾಷ್ಟ್ರದಲ್ಲಿ ಶಾಸ್ತ್ರೀಯ ಭಾಷೆಯ ಸ್ತಾನಮಾನವನ್ನು ೩ ಭಾಷೆಗಳಿಗೆ ಮಾತ್ರ ನೀಡಲಾಗಿದೆ. ಈಗ ತಮಿಳುಭಾಷೆಗೆ ಮಾತ್ರ ಶಾಸ್ತ್ರೀಯ ಸ್ಥಾನಮಾನ ಸಿಗುತ್ತಿದೆ. ಕನ್ನಡಕ್ಕೆ 2ವರ್ಷಗಳ ಹಿಂದೆಯೇ ಶಾಸ್ತ್ರೀಯ ಸ್ಥಾನಮಾನವಿದ್ದರೂ ತಮಿಳುನಾಡಿನ ಕೊಂಗರ ಕುಚೇಷ್ಟೇಯಿಂದ ಅದು ನಮಗಿನ್ನು ಬಿಸಿಲ್ಗುದುರೆಯಾಗಿದೆ. ತಿರುವಳ್ಳುವರ್ ಪ್ರತಿಮೆ ಸ್ಥಾಪನೆಯಾದಾಕ್ಷಣ ಎಲ್ಲವೂ ಸರಿಯಾಗುತ್ತದೆ ಎನ್ನುವ ಸರ್ಕಾರಗಳು ರಾಜಕಾರಣಿಗಳು, ಮತ್ತು ಕೆಲವು ಸಾಹಿತ್ಯ ವಲಯದ ಅತಿಬುದ್ದಿವಂತರು ಈಗ ಏನೆನ್ನುತ್ತಾರೆ ಗೊತ್ತಿಲ್ಲ. ಕನ್ನಡ ನಮ್ಮ ಭಾವಸ್ಪೂರ್ತಿಯಾಗಿ, ನಮ್ಮ ಒಡಲಾಳದ ಧ್ವನಿಯಾಗಿ ನಮ್ಮ ನಿತ್ಯದ ಉಸಿರಾಗಿರುವಾಗ ಕನ್ನಡದ ಬಗ್ಗೆ ತಾತ್ಸಾರ ಅಸಡ್ಡೆ ಏಕೆ?

Sunday, October 25, 2009

2012ಕ್ಕೆ ಪ್ರಳಯ ನಿಜಾನಾ ? ಎನಿದೆಲ್ಲಾ?

2012ಕ್ಕೆ ಪ್ರಳಯ ಅಂತೇ ಹೌದಾ ಎಂಬ ಪ್ರಶ್ನೆಗಳು ಈಗ ಎಲ್ಲೆಡೆ ಹರಿದಾಡುತ್ತಿದೆ. ಇಂಟರ್ ನೆಟ್ ಗಳಲ್ಲಿ , ಹಾಲಿವುಡ್ ನಸಿನಿಮಾಗಳಲ್ಲಿ , ಆಂಗ್ಲ ಸಾಹಿತ್ಯದಲ್ಲಿ , ದೃಶ್ಯ ಮಾದ್ಯಮಗಳಲ್ಲಿ, ದಿನಪತ್ರಿಕೆಗಳಲ್ಲಿ ಪ್ರಳಯದ ಬಗ್ಗೆ ಮಾಹಿತಿ ಬರುತ್ತಿದ್ದಂತೆ, ಆ ಬಗೆಗಿನ ಕುತೂಹಲವೂ ಜಾಸ್ತಿಯಾಗುತ್ತಿದೆ. ಎಲ್ಲಿ ಧಾರ್ಮಿಕ ನಂಬಿಕೆಗಳು ಪ್ರಬಲವಾದ ಅಸ್ತಿತ್ವವನ್ನು ಹೊಂದಿರುತ್ತವೆಯೋ ಅಲ್ಲೆಲ್ಲ ಅವುಗಳ ಪರಿಣಾಮವೂ ಸಹಾ ತೀವ್ರವಾಗಿಯೇ ಆಗುತ್ತಿದೆ. ನಮಗೆತಿಳಿದೋ ತಿಳಿದಯದೆಯೋ ಇಂತಹದ್ದೊಂದು ಪ್ರಶ್ನೆ ನಮ್ಮೆಲ್ಲರೆದುರು ಬಂದು ಧುತ್ತನೆ ಪ್ರತ್ಯಕ್ಷವಾಗಿರುವಾಗ ಆತಂಕ/ಕುತೂಹಲ ಸಹಜವೇ ಈ ನಿಟ್ಟಿನಲ್ಲಿ ಒಂದುಷ್ಟು ವಿಚಾರಗಳನ್ನು ನೋಡೋಣ.
ಅಸಲಿಗೆ ಇಂತಹದ್ದೊಂದು ಪ್ರಶ್ನೆ ನಿನ್ನೆ ಮೊನ್ನೆಯದೇನಲ್ಲ, ಭೂ ಮಂಡಲದ ಮೇಲೆ ಜೀವ ವೈವಿದ್ಯ ಬಂದ ಮೇಲೆ ಮಾನವ ಜೀವಿಯ ಅಸ್ತಿತ್ವ ಹುಟ್ಟಿಕೊಂಡ ಮೇಲೆ ಟಿಸಿಲೊಡೆದ ಮೂಟೆ ಹಲವು ಕುತೂಹಲಗಳನ್ನು ವಿಸ್ಮಯಗಳನ್ನು ತೆರೆದಿಡುತ್ತಾ ಬಂದಿದೆ. ಇಂತಹ ವಿಸ್ಮಯಗಳು ಮತ್ತು ಆತಂಕಗಳನ್ನು ಪರಿಗ್ರಹಿಸಲು ಮತ್ತು ವಿಶ್ಲೇಷಿಸಲು ಜಾಗತಿಕ ಮಟ್ಟದಲ್ಲಿ" ನಾಸಾ " ಸಂಸ್ಥೆ ನಿರಂತರ ಸಂಶೋಧನೆಗಳನ್ನು ಮಾಡುತ್ತಲೆ ಬಂದಿದೆ. ಈ ಪೈಕಿ ಶೇ.10ರಷ್ಟಕ್ಕೆ ಅದು ಖಚಿತವಲ್ಲದ ಆದರೆ ಸತ್ಯಕ್ಕೆ ಹತ್ತಿರವಾದ ಉತ್ತರಗಳನ್ನು ಸಹಾ ಕಂಡು ಕೊಂಡಿದೆ. ಇನ್ನೂ ಹತ್ತು ಹಲವು ವಿಸ್ಮಯಗಳಿಗೆ ಉತ್ತರ ಸಿಗಬೇಕಾಗಿದೆ. ಇಂತಹವುಗಳಲ್ಲಿ ಆಕಾಶದಲ್ಲಿ ಕಂಡು ಬಂದ ಹಾರುವ ತಟ್ಟೆ, ದೇಗುಲದ ಮೇಲೆ ಬಿದ್ದ ಬೆಳಕಿನ ಕಿರಣಗಳು, ದೂರದ ಸಮುದ್ರದಲ್ಲೆಲ್ಲೋ ದಡದಲ್ಲಿ ಕಂಡು ಬಂದ ಇತ್ತ ಮನುಷ್ಯನೂ ಅಲ್ಲದ ಅತ್ತ ಪ್ರಾಣಿಯೂ ಅಲ್ಲದ ಜೀವಿ, ಮಂಗಳ ಗ್ರಹದಿಂದ ಬಂದ ಜೀವಿಯಂತೆ ಕಾಣುವ ಪುಟ್ಟ ಮಗುವಿನಾಕಾರದ ದೊಡ್ಡಕಣ್ಣುಗಳುಳ್ಳ ಜೀವಿ ಹೀಗೆ 1000ಕ್ಕೂ ಹೆಚ್ಚು ವಿಸ್ಮಯಗಳು ನಂಬಲು ಸಾಧ್ಯವಾಗದ ವಿಚಾರಗಳು ನಾಸಾ ದ ಸಂಶೋಧನೆಯಲ್ಲಿವೆ. ಈ ಸಂಧರ್ಭದಲ್ಲಿ ಕಳೆದ ನಾಲ್ಕೈದು ವರ್ಷಗಳ ಹಿಂದೆ ಪ್ರಳಯದ ಬಗ್ಗೆ ಜಗತ್ತಿನಾಧ್ಯಂತ ಕಲ್ಪಿತ ವಿಚಾರಗಳ ಸಂಗ್ರಹ ಮಾಧ್ಯಮಗಳಲ್ಲಿ, ಸಾಹಿತ್ಯದಲ್ಲಿ ಪ್ರಕಟವಾಗಿತ್ತು. ಪಾಶ್ಚಾತ್ಯ ಕಾದಂಬರಿಕಾರರಲ್ಲಿ ಪ್ರಸಿದ್ದರಾದ ಸರ್ ಟನ್ ಆರ್ಥರ್ ಕಾನನ್ ಡಾಯ್ಲ್ "ದಿ ಲಾಸ್ಟ್ ವರ್ಲ್ಡ್ " ಕೃತಿಯಲ್ಲಿ ಸಾದ್ಯಂತವಾಗಿ ಚಿತ್ರಿಸಿದ್ದರು. ತಾಂತ್ರಿಕ ವಿಚಾರ ಚಿಂತನೆಯಲ್ಲಿ ದೇಶೀಯರಿಗಿಂತ 100ವರ್ಷಗಳಷ್ಟು ಮುಂದಿರುವ ಪಾಶ್ಚಾತ್ಯರು ಸಿನಿಮಾಗಳಲ್ಲಿ ಪ್ರಪಂಚ ನಾಶದ ಬಗ್ಗೆ , ಅನ್ಯಗ್ರಹ ಜೀವಿಗಳ ಬಗ್ಗೆ ಕಪೋಲ ಕಲ್ಪಿತ ಚಿತ್ರಗಳನ್ನು ಬೂಮಂಡಲದಲ್ಲಿ ಸಾವಿರಾರು ವರ್ಷಗಳಷ್ಟು ಹಿಂದೆ ಜೀವಿಸದ್ದವೆನ್ನಲಾದ ಡೈನೋಸಾರಸ್ ಗಳ ಬಗ್ಗೆ ನೈಜ ರೀತಿಯಲ್ಲಿ ಚಿತ್ರಿಸಿದ್ದು, ಪ್ರಪಂಚವಿನಾಶದ ಕಲ್ಪನೆಗೆ ಜೀವ ತುಂಬಿತು.
ಇದನ್ನೆ ಬಂಡವಾಳ ಮಾಡಿಕೊಂಡ ಜ್ಯೋತಿಷಿಗಳು,ಪಾದ್ರಿಗಳು, ಧಾರ್ಮಿಕ ಸಂಸ್ಥೆಗಳು ಅದಕ್ಕೆ ಇನ್ನಷ್ಟು ಕಟ್ಟುಕಥೆಗಳನ್ನು ತುಂಬಿ ತಮ್ಮ ಧರ್ಮ ಪ್ರಚಾರಕ್ಕನುಗುಣವಾಗಿ ಮತ್ತು ಧಾರ್ಮಿಕ ನಂಬಿಕೆಗಳನ್ನು ಹಣಗಳಿಸುವ ವಿಚಾರ ಮಾಡಿಕೊಂಡು ಜಾಗತಿಕ ಪ್ರಳಯವನ್ನು ಕಣ್ಣಂಚಿಗೆ ತಂದು ನಿಲ್ಲಿಸಿದೆ. ಇದು ಧಾರ್ಮಿಕ ನಂಬಿಕೆ ಇರಿಸಿಕೊಂಡ ಮಿಲಿಯನ್ ನಷ್ಟು ಜನರ ಮೇಲೆ ಗಾಢವಾದ ಪರಿಣಾಮವನ್ನು ಬೀರಿದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಎಷ್ಟೋ ಮಂದಿ ತಮ್ಮ ಬದುಕಿನ ಆಧಾರವಾದ ಉದ್ದಿಮೆಯನ್ನು ಒಳ್ಳೊಳ್ಳೆ ನೌಕರಿಗಳನ್ನು ತ್ಯಜಿಸಿ ಆಧ್ಯಾತ್ಮಿಕ ಬದುಕಿಗೆ ಶರಣು ಹೋಗುತ್ತಿದ್ದಾರೆ. ಕ್ರೈಸ್ತರ ಮಾಯನ್ ಕನ್ನಡಿ ಕ್ಯಾಲೆಂಡರ್ ಇಂತಹದ್ದಕ್ಕೆ ಪುಷ್ಟಿ ನೀಡಿದೆ. ಈಗ ಭಾರತದಲ್ಲೂ ಇಂತಹ ಅಲೆ ಬಂದಿದೆ. ಹೇಳಿಕೇಳಿ ಭಾರತ ಅಪ್ಪಟ ದೈವಿಕ ಸಂಸ್ಕ್ರತಿ, ಮತ್ತು ನಂಬಿಕೆಗಳ ಮೇಲೆ ಆಧಾರವಾಗಿರುವ ಜನರನ್ನು ಹೊಂದಿರುವ ದೇಶ. ಇಂತಹ ನಂಬಿಕೆಗಳನ್ನು ಬಂಡವಾಳ ಮಾಡುವ ನಿಟ್ಟಿನಲ್ಲಿ ಮಾಂತ್ರಿಕರು, ಜ್ಯೋತಿಷಿಗಳು ಪ್ರಪಂಚದ ವಿವಿದೆಡೆ ಸಂಭವಿಸುತ್ತಿರುವ ಅವಘಡಗಳನ್ನು ತಮ್ಮ ಆಧಾರವಾಗಿ ತೋರಿಸಿಕೊಂಡು ನಮ್ಮ ಜನರನ್ನು ಇನ್ನಷ್ಟು ಆತಂಕಗಳಿಗೆ ತಳ್ಳುತ್ತಿದ್ದಾರೆ. ಏಸು ಹುಟ್ಟಿಬರುತ್ತಾನೆ, ಕಲ್ಕಿಯ ಜನ್ಮವಾಗುತ್ತದೆ, ಪೈಗಂಬರ್ ಅವತಾರ ತಾಳುತ್ತಾನೆ ಎಂಬೆಲ್ಲ ಬೊಗಳೆಗಳು ಪ್ರಳಯದ ತೀಕ್ಷಣತೆಯ ಅರಿವು ಮುಡಿಸುವುದರೊಂದಿಗೆ ಜನರ ನಂಬಿಕೆಯನ್ನು ತಮ್ಮ ಹಿಡಿತಕ್ಕೆ ತಂದು ಕೊಳ್ಳುತ್ತಿವೆ. ಆ ಮೂಲಕ ಧರ್ಮ ಪ್ರಚಾರ, ಇಲ್ಲವೇ ತಮ್ಮ ಬಂಡವಾಳಶಾಹಿ ಮನೋಧರ್ಮವನ್ನು ಜನರಿಗೆ ತಿಳಿಯದಂತೆ ಬಿತ್ತಲಾಗುತ್ತಿದೆ.ಧಾರ್ಮಿಕ ಕೇಂದ್ರಗಳು ಈ ನೆಪದಲ್ಲಿ ಜನರ ಆಕರ್ಷಣೆಯ ಕೇಂದ್ರಗಳಾಗಿ ಮಾಡಿಕೊಳ್ಳಲು ಮುಂದಾಗಿವೆ. ಜನರ ಹಪಾಹಪಿತನ, ಭ್ರಷ್ಠಾಚಾರ, ಕೊಲೆ, ಸುಲಿಗೆ ವಂಚನೆ, ಮೋಸ ಇವುಗಳಲ್ಲಿ ಏನಾದರೂ ಪ್ರಳಯದ ಕಾರಣಕ್ಕಾಗಿ ಬದಲಾದೀತೆ ಎಂದು ನೋಡುವುದಾದರೂ ನಮ್ಮ ಜನರ ಮನಸ್ಥಿತಿ ಆ ರೀತಿ ಇಲ್ಲ. ಬದುಕಿದಷ್ಟು ದಿನ ಸಿಕ್ಕಷ್ಟು ದೋಚಿಕೊಂಡು ಸಮೃದ್ದವಾಗಿ ನಾನು ಬದುಕಬೇಕು ಅಂದು ಕೊಳ್ಳುವವರದ್ದೇ ಹೆಚ್ಚಿನ ಸಂಖ್ಯೆ. ಪ್ರಳಯ ಹತ್ತಿರದಲ್ಲಿದೆ ಎಂದರೆ ಪ್ರಪಂಚದ ಎಲ್ಲ ಸುಖಕ್ಕಾಗಿ ಏನು ಬೇಕಾದರೂ ಮಾಡುವ ಮನಸ್ಥಿತಿ ಇದೆ. ಈ ನಡುವೆ ಆದ್ಯಾತ್ಮಿಕ ಚಿಂತನೆಯೆಡೆಗೆ ಸಾಗುವವರು ಈಗಾಗಲೇ ಎಲ್ಲವನ್ನು ಮಾಡಿ ಮುಗಿಸಿದ ಮಂದಿ.
ಹಾಗಾದರೆ ಪ್ರಳಯವಾಗೋದು ಸುಳ್ಳ? ಅದಕ್ಕೆ ವೈಜ್ಞಾನಿಕ ಕಾರಣಗಳಿವೆಯಲ್ಲ ಎನ್ನಬಹುದು. ಪ್ರಳಯವಾಗೋದು ನಿಜ ಮಾದ್ಯಮಗಳಲ್ಲಿ ಪ್ರಚಾರವಾಗುತ್ತಿರುವಂತೆ ಪ್ರಳಯದ ವರ್ಷ ಮತ್ತು ದಿನಾಂಕಗಳೆಲ್ಲ ಶುದ್ದಾಂಗ ಸುಳ್ಳು. ಏಕೆ ಅಂತೀರಾ ಸೌರವ್ಯೂಹದ ಬಗ್ಗೆ ಇನ್ನು ಸಂಶೋಧನೆಗಳು ನಡೆಯುತ್ತಿವೆ ಅವು ಭೂಮಿ ಗುರುತ್ವಾಕರ್ಷಣೆ ಕಳೆದು ಕೊಳ್ಳುವ ಬಗ್ಗೆ ತನ್ನ ಕಕ್ಷೆಯನ್ನು ಬದಲಿಸುವ ಬಗ್ಗೆ ಎಲ್ಲಿಯೂ ನಿಖರವಾಗಿ ತಿಳಿಸಿಲ್ಲ. ಆದರೆ ಒಂದಂತೂ ನಿಜ ನಾವು ಪ್ರಳಯಕ್ಕೆ ಹತ್ತಿರವಾಗುತ್ತಿದ್ದೇವೆ, ಅದು ಹೇಗೆ???ಅಮೇರಿಕದಲ್ಲಿ ಹರಿಕೇನ್ ನಂತಹ ಚಂಡಮಾರುತ, ಜಗತ್ತಿನೆಲ್ಲೆಡೆ ಸುನಾಮಿಯಂತಹ ಭಯಾನಕ ಸಮುದ್ರ ಅಲೆಗಳು, ಆಮ್ಲ ಮಳೆಗಳು, ಜ್ವಾಲಾಮುಖಿಗಳು, ಭೂಕಂಪನಗಳು, ಉಲ್ಕಾಪಾತಗಳು, ಮಹಾ ಯುದ್ದಗಳು, ಕಂಡೂ ಕೇಳರಿಯದ ಮಹಾಮಾರಿ ಕಾಯಿಲೆಗಳು, ಪ್ರಪಂಚದ ಜಾಗತಿಕ ತಾಪಮಾನ ಏರಿಕೆ, ನೀರಿನ ಪ್ರಮಾಣದ ಏರಿಕೆ, ಮಳೆಕಾಡುಗಳ ನಾಶ, ಪರಿಸರ ಅಸಮತೋಲನ, ಓಜೋನ್ ಪದರದ ನಾಶ ಇವು ಮಾತ್ರ ಜಗತ್ತಿನ ನಾಶದ ಸ್ಪಷ್ಟ ಚಿತ್ರಣಗಳು. ಜಗತ್ತಿನಲ್ಲಿ ಬೆಳೆಯುತ್ತಿರುವ ಅತಿಯಾದ ಔದ್ಯೋಗಿಕರಣ,ಅಣೆಕಟ್ಟುಗಳು, ರಾಸಾಯನಿಕ ಉದ್ದಿಮೆಗಳು, ಅಣು ಸ್ಥಾವರಗಳು ನಮ್ಮ ಬದುಕಿನ ವಿನಾಶದ ಕ್ಷಣಗಳನ್ನು ಕಣ್ಣ ಮುಂದೆಯೇ ತಂದು ನಿಲ್ಲಿಸಿವೆ. ಇದು ಕಣ್ಣೆದುರಿನ ಸತ್ಯ. ಈ ಸತ್ಯಕ್ಕೆ ಉತ್ತರವೂ ಇಲ್ಲಿಯೇ ಇದೆ, ನಮ್ಮ ಜನ ವಿಚಾರ ಜಾಗೃತಿ ಬೆಳೆಸಿಕೊಳ್ಳಬೇಕು, ಪರಿಸರದ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕು, ಜಾಗತಿಕ ನಾಶಕ್ಕೆ ಕಾರಣವಾಗುವಂತಹ ಕ್ರಿಯೆಗಳ ನಿಯಂಯತ್ರಣ ಮನುಷ್ಯನಿಂದಲೇ ಸಾಧ್ಯ ಅದಕ್ಕಾಗಿ ಸಂಘಟಿತ ಪ್ರಯತ್ನವಾಗಬೇಕು, ಹೀಗಾದಾಗ ಯಾವ ಪ್ರಳಯವೂ ನಮ್ಮ ಮುಂದೆ ಸುಳಿಯಲಾರದಲ್ಲವೇ? ದಿನಬೆಳಗಾದರೆ ಟಿವಿ ಗಳಲ್ಲಿ ಪತ್ರಿಕೆಗಳಲ್ಲಿ ಒಂದಿಲ್ಲೊಂದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಜ್ಯೋತಿಷಿಗಳು ತಮ್ಮ ಪ್ರವರಗಳನ್ನು ಮುಂದಿಡುತ್ತಿದ್ದಾರೆ. ಸದರಿ ವಿಚಾರದ ಕಾರ್ಯಕ್ರಮಗಳ ಟಿ ಆರ್ ಪಿ ಏರುತ್ತಿದೆ. ಮುಲ್ಟಿನ್ಯಾಷನಲ್ ಕಂಪನೆಗಳು ಆ ಸಮಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಜಾಹೀರಾತುಗಳನ್ನು ಹಾಕುತ್ತಿವೆ, ಕೆಲಸಕ್ಕೆ ಬಾರದ ತಮ್ಮ ಉತ್ಪನ್ನಗಳನ್ನು ನಮ್ಮ ಮನೆಯಂಗಳಕ್ಕೆ ತಂದು ಹಾಕುತ್ತಿವೆ. ಆ ಮೂಲಕ ನಮ್ಮ ನಂಬಿಕೆಯ ಅಸ್ತಿತ್ವಕ್ಕೆ , ಧಾರ್ಮಿಕ ಭಾವನೆಗೆ, ಸಂಸ್ಕ್ರತಿಗೆ ಕೊಡಲಿ ಏಟು ನೀಡುತ್ತಿವೆ, ಒನ್ಸ್ ಎಗೈನ್ ಇದು ಜಾಗತೀಕರಣದ ಮತ್ತೊಂದು ಕೊಡುಗೆ!
ಹೀಗಿರುವಾಗ ಯಾವನೋ ಪಾದ್ರಿ, ಸೈತಾನ,ಮೌಲ್ವಿ,ಸ್ವಾಮೀಜಿ, ಜ್ಯೋತಿಷಿ ನಮ್ಮ ನಂಬಿಕೆಗಳ ಮೇಲೆ ಸವಾರಿ ಮಾಡಲು ಬಿಡಬೇಕೆ? ಆ ಮೂಲಕ ವಸಾಹತು ಶಾಹಿ ವಿಜೃಂಬಿಸಲು ಅವಕಾಶ ಮಾಡಬೇಕೆ? ಹೋಗಲಿ ಪ್ರಳಯದಿಂದ ತಪ್ಪಿಸಿಕೊಳ್ಳಲು ಅವರು ಸೂಚಿಸುವ ಮಾರ್ಗವೇನು? ಯಾರೋ ಧಾರ್ಮಿಕ ಪುರುಷನೊಬ್ಬ ಅವತರಿಸುತ್ತಾನಂತೆ, ಹಾಗಾಗಿ ಅವರು ಹೇಳಿದಂತೆ ನಾವು ಮತಾಂತರವಾಗಬೇಕಂತೆ,ಅವನಿಂದ ಹೊಸ ಜಗತ್ತು ಸೃಷ್ಟಿಯಾಗುತ್ತಂತೆ ಕೆಟ್ಟವರು ನರಕಕ್ಕೆ ಹೋಗುತ್ತಾರಂತೆ ಇಂತವೆಲ್ಲ ಚಂದಮಾಮ ಕಥೆಗಳಿಗೆ ಫುಲ್ ಸ್ಟಾಪ್ ಇಡಿ ಸ್ವಾಮಿ,ವಾಸ್ತವ ನೆಲೆಗಟ್ಟಿನಲ್ಲಿ ವಿಚಾರ ಮಾಡಿ, ಈ ಬಗ್ಗೆ ಈ ನಿಟ್ಟಿನಲ್ಲಿ ಆರೋಗ್ಯಕರ ಚರ್ಚೆಗಳಾಗಲೀ ಮತ್ತು ಕಾರ್ಯರೂಪಕ್ಕೂ ಬರುವುದು ಉಚಿತವಲ್ಲವೇ ನೀವೇ ಹೇಳಿ????